Download Our App

Follow us

Home » ಅಪರಾಧ » ಪೇಡಾನಗರಿ ಧಾರವಾಡದಲ್ಲಿ ಮತ್ತೆ ಚಿಗುರಿದ ರೌಡಿ ಪಡೆ. ಮೂವರು ಯುವಕರಿಗೆ ಚಾಕು ಇರಿತ. ಹೊಟ್ಟೆ ಹರಿದ ಚಾಕು

ಪೇಡಾನಗರಿ ಧಾರವಾಡದಲ್ಲಿ ಮತ್ತೆ ಚಿಗುರಿದ ರೌಡಿ ಪಡೆ. ಮೂವರು ಯುವಕರಿಗೆ ಚಾಕು ಇರಿತ. ಹೊಟ್ಟೆ ಹರಿದ ಚಾಕು

ಪ್ರೀತಿ, ಪ್ರೇಮ್ ಅಂತಾ ಓಡಾಡಿಕೊಂಡಿದ್ದ ಮೂವರು ಯುವಕರ ಮೇಲೆ ಮತ್ತೊಂದು ಗುಂಪಿನ ಯುವಕರು ಮೂವರಿಗೆ ಚಾಕು ಇರಿದ ಘಟನೆ ಧಾರವಾಡದ ಎಲ್ ಐ ಸಿ ಕಚೇರಿ ಬಳಿ ನಡೆದಿದೆ. ಜನನಿಬೀಡ ರಸ್ತೆಯಲ್ಲಿ ನಡೆದ ಘಟನೆ ಆತಂಕಕ್ಕೆ ಕಾರಣ ಸೃಷ್ಟಿಸಿದೆ. ಕಿರಣ, ಆಸೀಫ್, ಹಾಗೂ ಶಾನವಾಜ ಎಂಬ ಮೂವರು ಯುವಕರ ಹೊಟ್ಟೆಗೆ ಚಾಕು ಇರಿಯಲಾಗಿದೆ. ಯುವತಿ ವಿಚಾರವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗೆಳೆಯನ ಪ್ರಿಯತಮೆಗಾಗಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಉಪನಗರ ಪೊಲೀಸರು ದೌಡಾಯಿಸಿದ್ದಾರೆ. ಕಿರಣ ಎಂಬುವವನ ಹೊಟ್ಟೆಯಲ್ಲಿ ಚಾಕು ಹೊಕ್ಕಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಧಾರವಾಡದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಅಂತವರ ಹೆಡಮುರಿಗೆ ಕಟ್ಟಬೇಕಾಗಿದೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!