ಧಾರವಾಡ ಬಳಿ ಇರುವ ಬೇಲೂರು ಕೈಗಾರಿಕಾ ಪ್ರದೇಶದ ಅಂಡರಪಾಸನಲ್ಲಿ ಅನೀಲ್ ಸೋರಿಕೆಯಾಗಿ ಆತಂಕ ಸೃಷ್ಟಿ ಮಾಡಿದರೆ, ಮತ್ತೊಂದೆಡೆ ಹಾವೇರಿಯ ರಾಣೇಬೆನ್ನೂರನಲ್ಲಿ ಕ್ಯಾಂಡಲ ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ. ಶ್ರೀಕಾಂತ ಎಂಬುವವರ ಒಡೆತನದ ಸ್ಪಾರ್ಕ್ ಕ್ಯಾಂಡಲ್ ಕಂಪನಿಯಲ್ಲಿ ಬೆಳಗಿನ ಜಾವ ಸ್ಫೋಟದ ಸದ್ದು ಕೇಳಿಸಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
