Download Our App

Follow us

Home » ಭಾರತ » ಜಮೀನು ವ್ಯಾಜ್ಯ, ಗುಂಡಿನ ಗಲಾಟೆಗೆ ಕಾರಣ ಭಯಭೀತರಾದ ಧಾರವಾಡ ಜನ.

ಜಮೀನು ವ್ಯಾಜ್ಯ, ಗುಂಡಿನ ಗಲಾಟೆಗೆ ಕಾರಣ ಭಯಭೀತರಾದ ಧಾರವಾಡ ಜನ.

ಅನೇಕ ಬಿರುದಾವಳಿಗಳಿಂದ ಕರೆಯಲ್ಪಡುವ ಧಾರವಾದ ನಿವೃತ್ತರ ಸ್ವರ್ಗವೂ ಹೌದು. ಧಾರವಾಡ ಹೆಸರು ಪ್ರಸ್ತಾಪವಾದಾಗಲೆಲ್ಲ, ಸಂಗೀತಗಾರರು, ಸಾಹಿತಿಗಳು, ಶೈಕ್ಷಣಿಕ ತಜ್ಞರು, ಹೋರಾಟಗಾರರು, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಅಂತಹ ಧಾರವಾಡ ಈಗ ಉಳಿದುಕೊಂಡಿಲ್ಲ. ಕರ್ನಾಟಕ ವಿಶ್ವವಿಧ್ಯಾಲಯದ ಹಿಂದೆ ಜಮೀನು ವ್ಯಾಜ್ಯಕ್ಕಾಗಿ ನಡೆದ ಗುಂಡಿನ ಗಲಾಟೆ ಧಾರವಾಡದ ಶಾಂತಿ ಪ್ರಿಯರಲ್ಲಿ ಭಯ ಹುಟ್ಟಿಸಿದೆ.

ಸುಶಾಂತ ಅಗರವಾಲ ಹಾಗೂ ಪವನ ಕುಲಕರ್ಣಿ ನಡುವೆ 7 ಏಕರೆ ಜಮೀನಿನ ವಿಷಯವಾಗಿ ಗಲಾಟೆ ನಡೆದಿದೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗುಂಡಿನ ಶಬ್ದದೊಂದಿಗೆ ಅಂತ್ಯಗೊಂಡಿದೆ. ಸುಶಾಂತ ಅಗರವಾಲ ತಮ್ಮ ರಕ್ಷಣೆಗಾಗಿ ತಮ್ಮಲ್ಲಿದ್ದ ರಿವಾಲ್ವರನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿದ್ದು ನಿಜ ಎಂದಿರುವ ಡಿ ಸಿ ಪಿ ರಾಜೀವ, ಇಬ್ಬರ ವಿಚಾರಣೆ ನಡೆಸಿದ್ದಾರೆ. ಈ ಘಟನೆಯಿಂದಾಗಿ ಜನ ಭಯಭೀತಗೊಂಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!