Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹುಬ್ಬಳ್ಳಿ ಇದಗಾ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಅನುಮತಿ ನೀಡಿದ ಪಾಲಿಕೆ

ದೇಶದಾಧ್ಯಂತ ವಿವಾದಕ್ಕೆ ಕಾರಣವಾಗಿದ್ದ ಹುಬ್ಬಳ್ಳಿ ಇದಗಾ ಮೈದಾನದ ಸಮಸ್ಯೆ ಬಗೆಹರಿದು ನೆಮ್ಮದಿ ವಾತಾವರಣ ಸೃಷ್ಟಿಯಾಗಿದೆ. ಇದಗಾ ಮೈದಾನ ಪಾಲಿಕೆ ಆಸ್ತಿ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ್ದು ಆಗಿದೆ.

ಮುಸ್ಲಿಂರಿಗೆ ವರ್ಷಕ್ಕೆ ಎರಡು ಬಾರಿ ನಮಾಜ ಮಾಡಲು ಮತ್ತು ದ್ವಜಾರೋಹಣಕ್ಕೆ ಅವಕಾಶ ನೀಡಿದ್ದ ಪಾಲಿಕೆ ಇದೀಗ ಕಳೆದ ಸಲದಂತೆ ಈ ಸಲವು ಇದಗಾ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ ವೀಣಾ ಬರದ್ವಾಡ ಗಣೇಶ ಪ್ರತಿಷ್ಟಾಪನೆಗೆ  ಅನುಮತಿ ನೀಡಿದ್ದಾರೆ.

ರಾಣಿ ಚೆನ್ನಮ್ಮ ಗಜಾನನ ಮಂಡಳಿಗೆ ಗಣೇಶ ಪ್ರತಿಷ್ಟಾಪಿಸಲು ಅನುಮತಿ ನೀಡಿದ್ದು, ಮೂರು ದಿನಗಳ ಅವಧಿ ನಿಗಧಿಪಡಿಸಿ ಪರವಾನಿಗೆ ಕೊಡಲಾಗಿದೆ. ಹೈಕೋರ್ಟ ಆದೇಶದಂತೆ ಇದಗಾ ಮೈದಾನದ ವಿಷಯವಾಗಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಪಾಲಿಕೆ ಆಯುಕ್ತರಿಗೆ ನೀಡಿದೆ.

ಚೆಂಡು ಇದೀಗ ಪಾಲಿಕೆ ಆಯುಕ್ತರ ಕಡೆ ಹೋಗಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ ಕಮಿಷನರ ಜೊತೆ ಪಾಲಿಕೆ ಆಯುಕ್ತರು ಚರ್ಚಿಸುವ ಸಾಧ್ಯತೆ ಇದೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಹಿಂದೂ ಸಂಘಟನೆಗಳು ಗಣೇಶ ಪ್ರತಿಷ್ಟಾಪಾನೆಗೆ ಪಟ್ಟು ಹಿಡಿದಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!