ಧಾರವಾಡದ ತೆಗೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಮೇಲಿದ್ದ ಇಬ್ಬರು ಸವಾರರು ಸ್ಥಳದಲ್ಲಿಯೇ ಆಯ್ಕೆಯಾಗಿದ್ದಾರೆ. ಸಾವನ್ನಪ್ಪಿರುವವರನ್ನು ಕೋಟೂರ ಗ್ರಾಮದ ಗಂಗಾಧರ ಮಡಿವಾಳೆಪ್ಪ ಹೊಸವಾಳ, ಮತ್ತು ನಾಗರಾಜ ಎಂದು ಗುರುತಿಸಲಾಗಿದೆ. ಅಪರಿಚಿತ ವಾಹನ ಹಾಯ್ದು ಹೋಗಿರುವ ಸಾಧ್ಯತೆ ಇದೆ. ಬೈಕ್ ನಂಬರ KA 25 – HG 6787 ಮೇಲಿದ್ದ ಸವಾರರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಗರಗ ಠಾಣೆಯ ಇನ್ಸಪೆಕ್ಟರ್ ಸಮೀರ ಮುಲ್ಲಾ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.