Download Our App

Follow us

Home » ರಾಜಕೀಯ » ಗಣೇಶ ಮಂಟಪದಲ್ಲಿ ವೀರ ಸಾವರ್ಕರ ಪೋಟೋ ಹಾಕಿದ್ರೆ, ಫೋಟೋ ಜೊತೆ 5000 ರೂಪಾಯಿ ದೇಣಿಗೆ ಕೊಡ್ತಾರೆ.

ಗಣೇಶ ಮಂಟಪದಲ್ಲಿ ವೀರ ಸಾವರ್ಕರ ಪೋಟೋ ಹಾಕಿದ್ರೆ, ಫೋಟೋ ಜೊತೆ 5000 ರೂಪಾಯಿ ದೇಣಿಗೆ ಕೊಡ್ತಾರೆ.

ವಿಜಯಪೂರದ ಗಜಾನನ ಮಂಡಳಿಗಳಿಗೆ ಬಿಜೆಪಿಯ ಫೈರ್ ಬ್ರಾಂಡ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ದೇಣಿಗೆ ಘೋಷಣೆ ಮಾಡಿದ್ದಾರೆ. ಗಜಾನನ ಮಂಟಪಗಳಿಗೆ ವೀರ ಸಾವರ್ಕರ ಫೋಟೋ ಜೊತೆ 5 ಸಾವಿರ ರೂಪಾಯಿ ದೇಣಿಗೆ ನೀಡುವದಾಗಿ ಘೋಷಣೆ ಮಾಡಿದ್ದಾರೆ. ದೇಣಿಗೆ ವಿಷಯವಾಗಿ ಕೆಲಸ ಕಾರ್ಯಗಳನ್ನು ಬಿಟ್ಟು ಶಾಸಕರ ಕಚೇರಿಗೆ ಅಲೆದಾಡುವದು ಬೇಡ ಎಂದಿರುವ ಯತ್ನಾಳ, ನೀವಿದ್ದಲ್ಲಿಗೆ ಬಂದು ಸ್ವಾಮಿ ವಿವೇಕಾನಂದ ಸೇನೆಯವರು ದೇಣಿಗೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ಅನುಮತಿ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಡಿ ಎಂದು ಕರೆ ನೀಡಿರುವ ಶಾಸಕರು, ಅಧಿಕಾರಿಗಳು ಖುದ್ದು ತಮ್ಮ ಮಂಟಪಕ್ಕೆ ಬಂದು ಅನುಮತಿ ಕೊಡುತ್ತಾರೆ ಎಂದಿದ್ದಾರೆ. ಅಧಿಕಾರಿಗಳು ಕಿರುಕುಳ ಕೊಟ್ಟರೆ ನನ್ನ ಕಚೇರಿಯ ಗಮನಕ್ಕೆ ತರಬೇಕೆಂದು ಫರ್ಮಾನು ಹೊರಡಿಸಿದ್ದಾರೆ. ಹಬ್ಬ ಆಚರಣೆಗೆ ಯಾವದೇ ನಿರ್ಭಂದವಿರುವದಿಲ್ಲ ಇದಕ್ಕೆ ವಿಘ್ನೇಶ್ವರಾಯ ಸಾಕ್ಷಿ ಎಂದು ಟ್ವಿಟ್ ನಲ್ಲಿ ಹೇಳಿದ್ದಾರೆ. ಸ್ವಾಮಿ ವಿವೇಕಾನಂದ ಸೇನೆಯಿಂದ ಆಚರಿಸುವ ಗಜಾನನ ಮಂಟಪಕ್ಕೆ “ಸನಾತನ ಹಿಂದೂ ವೇದಿಕೆ ” ಎಂದು ನಾಮಕರಣ ಮಾಡಲಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!