Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಧಾರವಾಡ APMC ಯಲ್ಲಿ ಎಲ್ಲಾ ತರಕಾರಿ ಸಸ್ತಾ. ಟಮೆಟೋ 30 ರೂಪಾಯಿ ಬುಟ್ಟಿ, ಹಿರಿಕಾಯಿ 50 ರೂಪಾಯಿ, ಸೌತೆಕಾಯಿ 20 ರೂಪಾಯಿ ಬುಟ್ಟಿ. ಆರ್ಭಟಿಸಿದ್ದ ಕೆಂಪು ಸುಂದರಿಗೆ ಕೇಳೋರೆ ಇಲ್ಲ.

ಧಾರವಾಡ APMC ಯಲ್ಲಿ ತರಕಾರಿ ಬೆಲೆಗಳಲ್ಲಿ ಕುಸಿತವಾಗಿದೆ. ಕಳೆದ ತಿಂಗಳು ತರಕಾರಿ ಬೆಲೆ ಹೆಚ್ಚಳದಿಂದ ಕಂಗಲಾಗಿದ್ದ ಜನ, ಸಧ್ಯಕ್ಕೆ ನಿರಾಳರಾಗಿದ್ದಾರೆ. ಈರುಳ್ಳಿ, ಆಲೂಗಡ್ಡೆ, ಹಸಿಮೆಣಸಿನಕಾಯಿ, ಟಮೆಟೋ, ಹಿರಿಕಾಯಿ, ಸೌತೆಕಾಯಿ, ಸಬ್ಬಸಿಗೆ, ಮೆಂತೆ ಪಲ್ಲೆ, ಕೋತಂಬ್ರಿ ಸೇರಿದಂತೆ ಎಲ್ಲ ಬಗೆಯ ತರಕಾರಿಗಳ ಬೆಲೆಗಳು ಕಡಿಮೆಯಾಗಿವೆ. ಕಳೆದ ತಿಂಗಳು ಆರ್ಭಟಿಸಿದ್ದ ಕೆಂಪು ಸುಂದರಿ ಟಮೇಟೋಗೆ ಕೇಳೋರೆ ಇಲ್ಲದಂತಾಗಿದೆ.

ಯಾವದರ ದರ, ಎಷ್ಟು ಇಲ್ಲಿದೆ ನೋಡಿ 

ಪ್ರತಿ ಹತ್ತು ಕೆಜಿ ಈರುಳ್ಳಿ 250 ರಿಂದ 300 ರೂಪಾಯಿ

ಪ್ರತಿ ಹತ್ತು ಕೆಜಿ ಟಮೇಟೋ 50 ರೂಪಾಯಿ ಇಂದ 60 ರೂಪಾಯಿ

ಪ್ರತಿ ಹತ್ತು ಕೆಜಿ ಹಿರಿಕಾಯಿ 80 ರಿಂದ 100 ರೂಪಾಯಿ

ಪ್ರತಿ ಹತ್ತು ಕೆಜಿ ಸೌತೆಕಾಯಿ 20 ರಿಂದ 40 ರೂಪಾಯಿ

ಫ್ಲಾವರ 50 ರೂಪಾಯಿಗೆ ಮೂರು

ಸಬ್ಬಸಿಗೆ 20 ರೂಪಾಯಿಗೆ 5

ಮೆಂತೆ 20 ರೂಪಾಯಿಗೆ 6

ಕೋತಂಬ್ರಿ 35 ರೂಪಾಯಿಗೆ 6

ಹೀಗೆ ಧಾರವಾಡದ apmc ಮಾರುಕಟ್ಟೆಯಲ್ಲಿ ಪ್ರತಿಯೊಂದು ತರಕಾರಿಯ ಬೆಲೆ ಕಡಿಮೆಯಾಗಿದೆ. ಇಲ್ಲಿನ ತರಕಾರಿ ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಬೈಲಹೊಂಗಲ,  ಉತ್ತರ ಕನ್ನಡದ ಹಳಿಯಾಳ, ದಾಂಡೇಲಿ ಮತ್ತು ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹೋಗುತ್ತದೆ. 

ಓದುಗರ ಗಮನಕ್ಕೆ – ನಾಳೆಯಿಂದ ನಿಮ್ಮ ನೆಚ್ಚಿನ ಕರ್ನಾಟಕ ಫೈಲ್ಸ್ ನಲ್ಲಿ ಪ್ರತಿ ದಿನದ ತರಕಾರಿ ಬೆಲೆ ಲಭ್ಯವಾಗಲಿದೆ. ಇಂದೇ karnatakafiles.com ಗೆ subscribe ಆಗಿರಿ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!