ಆರೋಗ್ಯ ಸಚಿವ ದಿನೇಶ ಗುಂಡೂರಾವ ಆರೋಗ್ಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಕೆಲವೊಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಆರೋಗ್ಯ ಸಚಿವರಾದ ಮೇಲೆ ಹೊಸ ಹೊಸ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುವ ದಿನೇಶ ಗುಂಡೂರಾವ ಜನಮಾನಾಸದ ಮಂತ್ರಿಯಾಗಿ ಹೆಸರು ಮಾಡುತ್ತಿದ್ದಾರೆ. ತಮ್ಮ ಅಂಗಾಂಗ ದಾನದ ನಿರ್ಧಾರ ಮಾಡಿ, ಮೆಚ್ಚುಗೆ ಗಳಿಸಿದ್ದಾರೆ.
” ಅಂಗಾಂಗ ದಾನ ಮಾಡುವ ನಿಮ್ಮ ಒಂದು ನಿರ್ಧಾರ, ಮತ್ತೊಬ್ಬ ವ್ಯಕ್ತಿಯ ಬಾಳಿಗೆ ವರದಾನ. ಅಂಗಾಂಗ ದಾನದ ಪ್ರತಿಜ್ಞೆ ಮಾಡುವ ಮೂಲಕ ನನ್ನೊಂದಿಗೆ ನೀವೂ ಜೊತೆಯಾಗಿ, ಸಾವಿನಲ್ಲೂ ಸಾರ್ಥಕತೆ ಮೆರೆಯಿರಿ ಎಂದು ಸಚಿವ ದಿನೇಶ ಗುಂಡೂರಾವ” ಮನವಿ ಮಾಡಿದ್ದಾರೆ.