ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದ ಸಿ ಎಮ್ ಇಬ್ರಾಹಿಂ ಅವರನ್ನು ಸೇರಿದಂತೆ ರಾಜ್ಯ ಜೆಡಿಎಸ್ ಸಮಿತಿಯನ್ನು ವಿಸರ್ಜಿಸಲಾಗಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಸಿ ಎಮ್ ಇಬ್ರಾಹಿಂ, ಎನ್ ಡಿ ಎ ಬದಲು ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲಿಸುವದಾಗಿ ಹೇಳಿದ್ದರು. ಅಲ್ಲದೆ ನಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಇಬ್ರಾಹಿಂ ಹೇಳಿದ್ದರು.
ಇಂದು ನಡೆದ ಜೆಡಿಎಸ್ ಕೋರ ಕಮಿಟಿ ಸಭೆಯಲ್ಲಿ ಭಾಗವಹಿಸಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಡಾ. ಎಚ್ ಡಿ ದೇವೇಗೌಡರು ರಾಜ್ಯ ಸಮಿತಿ ವಿಸರ್ಜನೆ ಮಾಡಿ. ತಾತ್ಕಾಲಿಕ ರಾಜ್ಯ ಅಧ್ಯಕ್ಷರಾಗಿ ಎಚ್ ಡಿ ಕುಮಾರಸ್ವಾಮಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ಸಿ ಎಮ್ ಇಬ್ರಾಹಿಂರನ್ನು ಪಕ್ಷದ ಅಧ್ಯಕ್ಷ ಹುದ್ದೆಯಿಂದ ಉಚ್ಚಾಟನೆ ಮಾಡುವ ಬದಲು ರಾಜ್ಯ ಸಮಿತಿ ವಿಸರ್ಜನೆ ಮಾಡಿ ಕೈತೂಳೆದುಕೊಂಡಿದ್ದಾರೆ.