ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಇನ್ನು ನಿಂತಿಲ್ಲ ಅನ್ನೋದಕ್ಕೆ ಇಂದು ಮಾಜಿ ಸಚಿವ ವಿ ಸೋಮನ್ನ ನೀಡಿರುವ ಹೇಳಿಕೆ ಸಾಕ್ಷಿಯಾಗಿದೆ. ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ವಿ ಸೋಮಣ್ಣ, ಅಸಮಾಧಾನ ಹೊರಹಾಕಿದ್ದಾರೆ. ನನ್ನನ್ನು ಪಕ್ಷದಲ್ಲಿ ಎಲ್ಲ ರೀತಿಯಿಂದಲೂ ತುಳಿಯುವ ಹುನ್ನಾರ ನಡೆದಿದ್ದು, ಡಿಸೆಂಬರ್ 6 ರ ಬಳಿಕ ತೀರ್ಮಾನ ಪ್ರಕಟಿಸುವದಾಗಿ ಹೇಳಿದ್ದಾರೆ.
ಬಿಜೆಪಿ ಯಾವದೇ ಕುಟುಂಬದ ಆಸ್ತಿಯಲ್ಲ ಎಂದು ಟೀಕಿಸಿರುವ ವಿ ಸೋಮಣ್ಣ, ರಾಜಕಾರಣ ಯಾವದೇ ಮನೆತನಕ್ಕೆ ಸೀಮಿತವಾಗಬಾರದು, ರಾಜಕಾರಣ ನಾಟಕ ಕಂಪನಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ ವೈ ವಿಜಯೇಂದ್ರರ ಬಗ್ಗೆ ವಿ ಸೋಮಣ್ಣ ಗರಂ ಆಗಿದ್ದಾರೆ. ಇನ್ನೂವರೆಗೆ ನನಗೆ ಯಾರು ಸಹ ಸಂಪರ್ಕ ಮಾಡಿಲ್ಲ ಎಂದಿರುವ ಅವರು, ನಾನು ಸಹ ಯಾರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.