Download Our App

Follow us

Home » ರಾಜಕೀಯ » ಬೆಳಗಾವಿ ಅಧಿವೇಶನ ಅವಧಿ ವಿಸ್ತರಣೆಗೆ ಸಿ ಎಮ್ ಜೊತೆ ಚರ್ಚೆ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಹೆಚ್ಚಿನ ಸಮಯಾವಕಾಶ / ಬಸವರಾಜ ಹೊರಟ್ಟಿ

ಬೆಳಗಾವಿ ಅಧಿವೇಶನ ಅವಧಿ ವಿಸ್ತರಣೆಗೆ ಸಿ ಎಮ್ ಜೊತೆ ಚರ್ಚೆ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಹೆಚ್ಚಿನ ಸಮಯಾವಕಾಶ / ಬಸವರಾಜ ಹೊರಟ್ಟಿ

ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 4 ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಕಡ್ಡಾಯವಾಗಿ ಭಾಗವಹಿಸುವಂತೆ ವಿಧಾನ ಪರಿಷತ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ. ಕೆಲ ಶಾಸಕರು ಬೆಳಗಾವಿ ಅಧಿವೇಶನ ಕೇವಲ ಪ್ರತಿಭಟನೆಗೆ ಸೀಮಿತ ಎಂದು ಸದನಕ್ಕೆ ಗೈರು ಆಗ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಸೆಂಬರ್ 5 ಹಾಗೂ 6 ರಂದು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹೆಚ್ಚಿನ ಸಮಯ ನೀಡಲಾಗುವದು ಎಂದು ತಿಳಿಸಿದರು. ಚಳಿಗಾಲದ ಅಧಿವೇಶನ ಕನಿಷ್ಟ 25 ದಿನ ನಡೆಯಬೇಕು. ಅಧಿವೇಶನದ ಅವಧಿ ವಿಸ್ತರಣೆ ಮಾಡೋದಕ್ಕೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಸದನದಲ್ಲಿ ಗಂಭೀರ ಚರ್ಚೆ ನಡೆದಲ್ಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬಹುದು ಎಂದು ಹೇಳಿದ ಹೊರಟ್ಟಿ, ಶಾಸಕರ ಭವನ ನಿರ್ಮಾಣಕ್ಕೆ 20 ಎಕರೆ ಮೀಸಲಿದೆ. ಅಲ್ಲಿ ಶಾಸಕರ ಭವನ ನಿರ್ಮಾಣಕ್ಕೆ ನಿರ್ಧಾರ ಕೈಗೊಂಡರೆ, ಸರ್ಕಾರಕ್ಕೆ ಹಣ ಉಳಿತಾಯವಾಗುತ್ತದೆ ಎಂದು ಹೇಳಿದರು. ಅಧಿವೇಶನದ ಅವಧಿಯಲ್ಲಿ ವಸತಿಗಾಗಿಯೇ 4 ಕೋಟಿ ವೆಚ್ಚವಾಗುತ್ತದೆ ಎಂದರು

Karnataka Files
Author: Karnataka Files

Leave a Comment

RELATED LATEST NEWS

Top Headlines

ಕೊವಿಡ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಅಧ್ಯಯನ / ಸಿದ್ದರಾಮಯ್ಯ

ಕೊವಿಡ್ ಅಥವಾ ಕೊವಿಡ್ ಲಸಿಕೆಯ ಅಡ್ಡಪರಿಣಾಮದಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಮುಂದೆ ಇಂತಹ ಸಾವುಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಸಮರ್ಪಕ ಸಂಶೋಧನೆ ನಡೆಸಲು ತಜ್ಞರು

Live Cricket

error: Content is protected !!