Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಜೋಶಿ ಹಠಾವೋ, ಧಾರವಾಡ ಬಚಾವೋ, ಏನಿದು ಹೊಸ ಗೇಮ್ ಪ್ಲಾನ್ !

ಧಾರವಾಡ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ದಿಂಗಾಲೇಶ್ವರ ಶ್ರೀಗಳು ಮತ್ತೊಂದೆಡೆ ಕಾಂಗ್ರೇಸ್ ನಾಯಕರು ಜೋಶಿಯವರ ಮೇಲೆ ಮುಗಿ ಬಿದ್ದಿರುವದು, ಚುನಾವಣಾ ಕಣ, ರಣರಂಗದ ಸ್ವರೂಪ ಪಡೆದಿದೆ. 

ಕೇಂದ್ರ ಸಚಿವರಾಗಿರುವ ಜೋಶಿ, ಲಿಂಗಾಯತ ನಾಯಕರನ್ನು ತುಳಿಯುತ್ತ ಬಂದಿದ್ದಾರೆ ಎಂದು ನೇರವಾಗಿಯೇ ಆರೋಪಿಸಿರುವ ದಿಂಗಾಲೇಶ್ವರ ಶ್ರೀಗಳು, ಕ್ಷೇತ್ರದಲ್ಲಿ ಸದ್ದು ಮಾಡಿದ್ದಾರೆ. 

ಮತ್ತೊಂದೆಡೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಪ್ರಧಾನಿ ನರೇಂದ್ರ ಮೋದಿ, ಹಾಗೂ ಸಂಸದ ಜೋಶಿಯವರಿಗೆ ಗಂಭೀರ ಪ್ರಶ್ನೆಗಳನ್ನು ಕೇಳುವ ಮೂಲಕ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿರುವದು ದೊಡ್ಡ ಸುದ್ದಿ ಮಾಡಿದೆ. 

” ಜೋಶಿ ಹಠಾವೋ, ಧಾರವಾಡ ಬಚಾವೋ ” ಘೋಷಣೆ. ಏನಿದು ಹೊಸ ಗೇಮ್ ಪ್ಲಾನ್ 

ಕೇಂದ್ರ ಸಚಿವ ಪ್ರಲ್ಲಾದ ಜೋಶಿ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿರುವ ಕಾಂಗ್ರೇಸ್ ನಾಯಕರು, ಜೋಶಿ ಹಠಾವೋ, ಧಾರವಾಡ ಬಚಾವೋ ಎಂಬ ಘೋಷಣೆ ಮೊಳಗಿಸಿದ್ದಾರೆ. ಜೋಶಿ ಹಠಾವೋ ಧಾರವಾಡ ಬಚಾವೋ ಎಂಬ ಘೋಷಣೆ ನಿನ್ನೇ ಕಾಂಗ್ರೇಸ್ ಅಭ್ಯರ್ಥಿಯ ನಾಮಪತ್ರದ ಮೆರವಣಿಗೆಯಲ್ಲಿ ಜೋರಾಗಿ ಕೇಳಿ ಬಂದಿದೆ. 

ಈ ಬಾರಿ, ಜೋಶಿಯವರ ಸೋಲು ಶತಸಿದ್ದ ಎನ್ನುತ್ತಿರುವ ಕಾಂಗ್ರೇಸ್ ನಾಯಕರು, ನೇರವಾಗಿ ಜೋಶಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಗಳ ಅಕ್ಕ ಪಕ್ಕದಲ್ಲಿದ್ದರು, ಮಹಾದಾಯಿ ಯೋಜನೆ ಅನುಷ್ಟಾನ ಮಾಡದಿರುವದು  ಜೋಶಿ ಹಠಾವೋ, ಧಾರವಾಡ ಬಚಾವೋ ಎಂಬ ಘೋಷಣೆ ಕೂಗಲು ಕಾರಣವಾಗಿದೆ ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!