Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಸಮೀಕ್ಷೆ ಸುಳ್ಳು ಅನ್ನೋದಕ್ಕೆ ಇದೊಂದೇ ಸುಳ್ಳು ಅಂಕಿ ಸಾಕು! ಕರ್ನಾಟಕ ಫೈಲ್ಸ್ ನ exclusive story

ಇಂಡಿಯಾ ಟುಡೇ ಮತ್ತು ಆಕ್ಸಿಸ್ ಸಂಸ್ಥೆ ನಡೆಸಿದ ಮತಗಟ್ಟೆ ಸಮೀಕ್ಷೆ ( exit poll ) ನಲ್ಲಿ ಪ್ರಾದೇಶಿಕ ಪಕ್ಷವೊಂದು ಸ್ಪರ್ಧೆ ಮಾಡಿದ್ದಕ್ಕಿಂತ ಹೆಚ್ಚು ಗೆಲ್ಲುವ ಸ್ಥಾನಗಳನ್ನು ತೋರಿಸಲಾಗಿದೆ. ರಾಮವಿಲಾಸ ಪಾಸ್ವಾನ್ ಅವರ ಮಗ ಚಿರಾಗ ಪಾಸ್ವಾನ್ ರ ಪಕ್ಷದ LJP ಬಿಹಾರದಲ್ಲಿ ಕೇವಲ 5 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.

ಆದರೆ ಇಂಡಿಯಾ ಟುಡೇ ಹಾಗೂ ಆಕ್ಸಿಸ್ ನೀಡಿರುವ ಸಮೀಕ್ಷೆಯಲ್ಲಿ ಬಿಹಾರದಲ್ಲಿ LJP 4 ರಿಂದ 6 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ. ಅಲ್ಲದೆ ಮತಗಟ್ಟೆ ಸಮೀಕ್ಷೆ ನಡೆಸಿದವರು ಎಷ್ಟು ಜನರ ಆಭಿಪ್ರಾಯ ( sample ) ಪಡೆದಿದ್ದಾರೆ ಮತ್ತು ಯಾವ ಯಾವ ವಯಸ್ಸಿನವರನ್ನು ಮಾತನಾಡಿಸಿದ್ದಾರೆ ಅನ್ನೋದನ್ನ ಎಲ್ಲಿಯೂ ಹೇಳಿಲ್ಲ.

ಈ ಸಮೀಕ್ಷೆಗಳು ಸಂಶಯ ಹುಟ್ಟಿಸಿದ್ದು, ಇಂಡಿಯಾ ಒಕ್ಕೂಟದಲ್ಲಿರುವ ಪಕ್ಷಗಳು ಸಮೀಕ್ಷೆ ಬಹಿರಂಗವಾಗುವದಕ್ಕು ಮುಂಚೆಯೇ ಮತಗಟ್ಟೆ ( exit poll ) ಸಮೀಕ್ಷೆಗಳನ್ನು ತಿರಸ್ಕರಿಸಿದ್ದಾರೆ.

ಬಿಹಾರದಲ್ಲಿ ಬಿಜೆಪಿ 17 ಲೋಕಸಭಾ ಕ್ಷೇತ್ರಗಳಲ್ಲಿ, ಎನ್ ಡಿ ಎ ಮೈತ್ರಿ ಪಕ್ಷ ಜೆಡಿ(ಯೂ ) 16 ಕ್ಷೇತ್ರಗಳಲ್ಲಿ ಮತ್ತು ಚಿರಾಗ ಪಾಸ್ವಾನ್ ರ LJP 5 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. LJP 5 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಸಮೀಕ್ಷೆಯಲ್ಲಿ 4 ರಿಂದ 6 ಸ್ಥಾನಗಳಲ್ಲಿ ಅದು ಗೆಲ್ಲಲಿದೆ ಎಂದು ತಿಳಿಸಿದ್ದು, ಈ ಸಮೀಕ್ಷೆಯಲ್ಲಿ ಅಂಕಿ ಸಂಖ್ಯೆಗಳು ಗೊಂದಲ ಮೂಡಿಸಿವೆ ಅಷ್ಟೇ ಅಲ್ಲ ಸಂಶಯಕ್ಕೆ ಕಾರಣವಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!