ಮಂಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಚಿತ್ರನಟಿ ಕಮ್ ರಾಜಕಾರಣಿ ಕಂಗನಾ ರಾಣಾವತ್ ಗೆ CISF ಮಹಿಳಾ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.
ದೆಹಲಿಗೆ ಹೋಗಲು ಚಂದಿಗಡ ವಿಮಾನ ನಿಲ್ದಾಣಕ್ಕೆ ಬಂದಿದ್ದ ಕಂಗನಾ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ ಈ ಘಟನೆ ನಡೆದಿದೆ.
ಘಟನೆಯ ನಂತರ ಕಂಗನಾ ರಣಾವತ್ಗೆ ಕಪಾಳಮೋಕ್ಷ ಮಾಡಿದ ಚಂಡೀಗಢ ವಿಮಾನ ನಿಲ್ದಾಣದ ಸಿಐಎಸ್ಎಫ್ ಅಧಿಕಾರಿ ಕುಲ್ವಿಂದರ್ ಕೌರ್ ಮಾತನಾಡಿ, ”ರೈತ ಚಳವಳಿಯಲ್ಲಿ ರೈತರಿಗೆ 100-100 ರೂಪಾಯಿ ಕೊಟ್ಟಿದ್ದಾರೆ ಎಂದು ಕಂಗನಾ ಹೇಳಿ, ರೈತರಿಗೆ ಅಪಮಾನ ಮಾಡಿದ್ದಳು, ಆ ರೈತ ಚಳವಳಿಯಲ್ಲಿ ನನ್ನ ತಾಯಿಯೂ ಭಾಗವಹಿಸಿದ್ದರು ಎಂದು ಆಕೆ ಸಿಟ್ಟು ಹೊರಹಾಕಿದ್ದಾಳೆ.
ಘಟನೆ ನಂತರ CISF ತನಿಖೆಗೆ ಆದೇಶ ನೀಡಿದ್ದು, ಕಂಗನಾ ತನ್ನ ಮೇಲೆ ನಡೆದ ಘಟನೆ ಬಗ್ಗೆ ವಿಡಿಯೋ ಮಾಡಿ, ಪಂಜಾಬ್ ಹಾಗೂ ಹರಿಯಾಣಾದಲ್ಲಿ ಉಗ್ರ ಕೃತ್ಯಗಳು ನಡೆದಿರುವ ಬಗ್ಗೆ ಆರೋಪಿಸಿದ್ದಾಳೆ.
