ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಒಂದು ವರ್ಷದ ಪೂರೈಸಿದ ಬಳಿಕ ಮತ್ತೆ ಮೂರು DCM ನೇಮಕದ ಸದ್ದು ಕೇಳಿ ಬಂದಿದೆ.
ಸಚಿವ ಕೆ ಎನ್ ರಾಜಣ್ಣ, ಮೂರು DCM ನೇಮಕ ಮಾಡುವಂತೆ ನೀಡಿದ ಬಹಿರಂಗ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿತ್ತು. ಇದಕ್ಕೆ ಹೈಕಮಾಂಡ ಸ್ಪಂಧಿಸದೆ ಇದ್ದರು ಸಹ, ಸದ್ದು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಈಗಾಗಲೇ ಡಿ ಕೆ ಶಿವಕುಮಾರ ಉಪ ಮುಖ್ಯಮಂತ್ರಿಗಳಾಗಿದ್ದು, ಅವರ ಜೊತೆ ವಿವಿಧ ಸಮುದಾಯಗಳ ಮೂವರು ಹಿರಿಯ ಶಾಸಕರನ್ನು ಉಪ ಮುಖ್ಯಮಂತ್ರಿ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿರುವಂತೆ, ಕಾಂಗ್ರೇಸ್ ಹೈಕಮಾಂಡ ಇನ್ನು ಮೂವರು ಉಪ ಮುಖ್ಯಮಂತ್ರಿ ಮಾಡಲು ಒಪ್ಪಿಗೆ ನೀಡಿದರೆ, ಪರಿಶಿಷ್ಟ ಜಾತಿಯಿಂದ ಗ್ರಹ ಸಚಿವ ಜಿ ಪರಮೇಶ್ವರ. ಮುಸ್ಲಿಂ ಸಮುದಾಯದಿಂದ ಅಲ್ಪ ಸಂಖ್ಯಾತರ ಸಚಿವ ಜಿ ಜೆಡ್ ಜಮೀರಅಹ್ಮದ ಖಾನ್, ಲಿಂಗಾಯತ ಸಮುದಾಯದಿಂದ ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ, ಪರಿಶಿಷ್ಟ ಪಂಗಡ ಸಮುದಾಯದಿಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೆಸರು ಪ್ರಸ್ತಾಪವಾಗುತ್ತಿವೆ.