Download Our App

Follow us

Home » ಕರ್ನಾಟಕ » ಕರ್ನಾಟಕದ ಈ ಜಿಲ್ಲೆಗಳಲ್ಲಿ ಕಲಿತವರು ಎಷ್ಟು, ಕಲಿಯಲಾದವರು ಎಷ್ಟು ಜನ! ಇಲ್ಲಿದೆ ಡಿಟೇಲ್ ಮಾಹಿತಿ

ಕರ್ನಾಟಕದ ಈ ಜಿಲ್ಲೆಗಳಲ್ಲಿ ಕಲಿತವರು ಎಷ್ಟು, ಕಲಿಯಲಾದವರು ಎಷ್ಟು ಜನ! ಇಲ್ಲಿದೆ ಡಿಟೇಲ್ ಮಾಹಿತಿ

ಜನಗಣತಿಯ ಆಧಾರದ ಮೇಲೆ ಕರ್ನಾಟಕದಲ್ಲಿ ಸಾಕ್ಷರತೆಯ ಪ್ರಮಾಣವು 75.36% ಆಗಿದೆ 12. ಕರ್ನಾಟಕದಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆಯ ಪ್ರಮಾಣವು ಕ್ರಮವಾಗಿ 82.47% ಮತ್ತು 68.08% ಆಗಿದೆ. ಅತಿ ಹೆಚ್ಚು ಸಾಕ್ಷರತೆ ಪ್ರಮಾಣ ಹೊಂದಿರುವ ಕರ್ನಾಟಕದ ಪ್ರಮುಖ ಐದು ಜಿಲ್ಲೆಗಳು ಇಲ್ಲಿವೆ.

ದಕ್ಷಿಣ ಕನ್ನಡ 88.57% ರಷ್ಟು ಸಾಕ್ಷರತೆ ಹೊಂದಿದ ಜಿಲ್ಲೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 2,089,649 ಜನಸಂಖ್ಯೆ ಇದ್ದು, ಆ ಪೈಕಿ 1,666,323 ಜನ ಅಕ್ಷರಸ್ಥರಿದ್ದಾರೆ. ಆ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇಕಡಾ 88.57% ರಷ್ಟಿದೆ.

ಬೆಂಗಳೂರು ಜಿಲ್ಲೆಯಲ್ಲಿ ಒಟ್ಟು 9,621,551 ಜನಸಂಖ್ಯೆ ಇದ್ದು, ಈ ಪೈಕಿ 7,512,276 ಜನ ಅಕ್ಷರಸ್ಥರಿದ್ದಾರೆ. ಸಾಕ್ಷರತಾ ಪ್ರಮಾಣ ಶೇಕಡಾ 87.67% ರಷ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು1,177,361 ಜನಸಂಖ್ಯೆಯ ಪೈಕಿ 926,429 ಜನ ಅಕ್ಷರ ಕಲಿತಿದ್ದಾರೆ. ಈ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ 86.24%: ರಷ್ಟಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,437,169 ಜನಸಂಖ್ಯೆಯ ಪೈಕಿ 1,081,906 ಜನ ಅಕ್ಷರಸ್ಥರಿದ್ದಾರೆ. ಈ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ 84.06%ರಷ್ಟಿದೆ.

ಕೊಡಗು ಜಿಲ್ಲೆಯಲ್ಲಿ ಒಟ್ಟು 554,519 ಜನಸಂಖ್ಯೆಯ ಪೈಕಿ  412,877 ಜನ ಅಕ್ಷರಸ್ಥರಿದ್ದಾರೆ. ಈ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇಕಡಾ 82.61% ರಷ್ಟಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 1,752,753 ಜನಸಂಖ್ಯೆಯ ಪೈಕಿ 1,263,016 ಜನ ಅಕ್ಷರಸ್ಥರಿದ್ದಾರೆ. ಈ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ 80.45% ರಷ್ಟಿದೆ 

ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,847,023 ಜನಸಂಖ್ಯೆಯ ಪೈಕಿ 1,301,664 ಜನ ಅಕ್ಷರಸ್ಥರಿದ್ದಾರೆ. ಈ ಜಿಲ್ಲೆಯ ಸಾಕ್ಷರತಾ ಪ್ರಮಾಣ 80.00% ರಷ್ಟಿದೆ. 

ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿದ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1,174,271 ಜನಸಂಖ್ಯೆಯ ಪೈಕಿ 510,003 ಜನ ಅಕ್ಷರ ಕಲಿತಿದ್ದಾರೆ. ಈ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇಕಡಾ 51.83% ರಷ್ಟಿದೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!