Download Our App

Follow us

Home » ಭಾರತ » ರಾಹುಲ್ ಗಾಂಧಿ ಹಿಂದು ಧರ್ಮಕ್ಕೆ ಅವಮಾನಿಸಿಲ್ಲ / ಶಂಕರಾಚಾರ್ಯರು

ರಾಹುಲ್ ಗಾಂಧಿ ಹಿಂದು ಧರ್ಮಕ್ಕೆ ಅವಮಾನಿಸಿಲ್ಲ / ಶಂಕರಾಚಾರ್ಯರು

ಹಿಂದುಗಳೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿರುವವರು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಆದ್ರೆ ಹಿಂದು ಧರ್ಮ ಹಿಂಸೆಗೆ ಪ್ರಚೋದನೆ ನೀಡೋದಿಲ್ಲ ಎಂದು ಸದನದಲ್ಲಿ ಹೇಳಿರುವ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. 

ರಾಷ್ಟ್ರದ ಶೃದ್ದಾ ಕೇಂದ್ರವಾಗಿರುವ, ಲಕ್ಷಾಂತರ ಭಕ್ತರನ್ನು ಹೊಂದಿರುವ ಶಂಕರಾಚಾರ್ಯರು ರಾಹುಲ್ ಗಾಂಧಿಯವರ ಹಿಂದು ಧರ್ಮದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ರಾಹುಲ್ ಗಾಂಧಿ, ಹಿಂದು ಧರ್ಮಕ್ಕೆ ಅವಮಾನ ಮಾಡಿಲ್ಲ. ಹಿಂದು ಎಂದಿಗೂ ಹಿಂಸೆಗೆ ಪ್ರಚೋದನೆ ನೀಡುವದಿಲ್ಲ ಎಂದು ಹೇಳಿದ್ದಾರೆ. ತಮ್ಮನ್ನು ತಾವು ಹಿಂದು ಎಂದು ಕರೆಸಿಕೊಳ್ಳುತ್ತಿರುವವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಶಂಕರಾಚಾರ್ಯರು ಹೇಳಿದ್ದಾರೆ. 

ಕೆಲವು ವಾಹಿನಿಗಳು ಹಾಗೂ ಪತ್ರಕರ್ತರು ರಾಹುಲ್ ಗಾಂಧಿ ಹೇಳಿಕೆಯನ್ನು ತಿರುಚಿದ್ದು, ಗೊಂದಲ ಸೃಷ್ಟಿಸಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀಗಳು ತಿಳಿಸಿದರು.

Karnataka Files
Author: Karnataka Files

Leave a Comment

RELATED LATEST NEWS

error: Content is protected !!