ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ ಹಾವಳಿ ಇಟ್ಟಿದೆ. ಧಾರವಾಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮ ಕೈಗೊಂಡಿದ್ದರು. ಧಾರವಾಡ ಜಿಲ್ಲಾ ಪಂಚಾಯತ ತನ್ನ ಅತಿಥಿಗ್ರಹವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಎಡವಿದೆ.
ಧಾರವಾಡ ಡಿ ಸಿ ಕಂಪೌಂಡನಲ್ಲಿರುವ ಜಿಲ್ಲಾ ಪಂಚಾಯತಿಯ ಅತಿಥಿಗ್ರಹದ ಆವರಣ ಕಸದ ಗೂಡಾಗಿದೆ. ಡೆಂಗ್ಯೂ ಮುಕ್ತ ಮಾಡಲು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿರುವ ಸರ್ಕಾರ, ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅತಿಥಿಗ್ರಹ ಡೆಂಗ್ಯೂ ಹರಡುತ್ತಿದೆ. ಆವರಣದ ತುಂಬಾ ಗಲೀಜು ತುಂಬಿದ್ದರು, ಪಕ್ಕದಲ್ಲಿಯೇ ಇರುವ ಜಿಲ್ಲಾ ಪಂಚಾಯತ ಅಧಿಕಾರಿಗಳ ಕಣ್ಣಿಗೆ ಬೀಳದಿರುವದು ಮಾತ್ರ ಶೋಚನೀಯ
