ಧಾರವಾಡ ಹುಬ್ಬಳ್ಳಿ ನಡುವೆ ಓಡಾಡುತ್ತಿರುವ ಚಿಗರಿ ಬಸ್ಸುಗಳು ಅತೀ ವೇಗವಾಗಿ ಹೋಗುತ್ತಿದ್ದು, ಕೆಲವು ಕಡೆ ಸಂಚಾರಿ ಸಿಗ್ನಲ್ ಉಲ್ಲಂಘಿಸುವ ಪ್ರಕರಣಗಳು ಸಾಮಾನ್ಯವಾಗಿವೆ.
ಚಿಗರಿ ಬಸ್ ಚಾಲಕರು ಸಹ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ ಅನ್ನೋ ಆರೋಪಗಳು ಕೇಳಿ ಬರುತ್ತಿರುವ ನಡುವೆ ಸಂಚಾರಿ ಪೊಲೀಸರು, ಅತೀ ವೇಗವಾಗಿ ಬಸ್ಸು ಓಡಿಸುತ್ತಿದ್ದ, ಚಿಗರಿ ಬಸ್ ಚಾಲಕನಿಗೆ ದಂಡ ವಿಧಿಸಿ, ಎಲ್ಲರಿಗೂ ಒಂದೇ ಕಾನೂನು ಎಂಬ ಸಂದೇಶ ಕೊಟ್ಟಿದ್ದಾರೆ.