Download Our App

Follow us

Home » ಅಪಘಾತ » ವಾಯನಾಡಿನಲ್ಲಿ ಭೂ ಕುಸಿತ. 123 ಜನರ ಸಾವು. ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ. ರಕ್ಷಣಾ ಕಾರ್ಯ ನಿರಂತರ

ವಾಯನಾಡಿನಲ್ಲಿ ಭೂ ಕುಸಿತ. 123 ಜನರ ಸಾವು. ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ. ರಕ್ಷಣಾ ಕಾರ್ಯ ನಿರಂತರ

ಭೂಕುಸಿತ ಪೀಡಿತ ವಯನಾಡಿನ ಮುಂಡಕೈ ಪ್ರದೇಶದಲ್ಲಿ ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಸೇರಿದಂತೆ ನೂರಾರು ಜನರು ನಾಪತ್ತೆಯಾಗಿರುವ ಸುದ್ದಿ ಬಂದಿದೆ. 

ಮುಂಡಕ್ಕೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹ್ಯಾರಿಸನ್ಸ್ ಟೀ ಮತ್ತು ಏಲಕ್ಕಿ ತೋಟದಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ಸೇರಿದಂತೆ 600 ಕಾರ್ಮಿಕರು ಕೆಲಸ ಮಾಡುತ್ತಿದ್ದರು. 

ಈ ಪೈಕಿ 65 ಕುಟುಂಬಗಳು ಚಹಾ ತೋಟದ ಪಕ್ಕದ ಹೊಳೆ ಬಳಿಯ ಲೈನ್ ಮನೆಗಳಲ್ಲಿ ವಾಸವಾಗಿದ್ದವು. ಆ ಮನೆಗಳಲ್ಲಿ ವಾಸಿಸುತ್ತಿದ್ದ ಹೆಚ್ಚಿನ ಜನರು ನಾಪತ್ತೆಯಾಗಿದ್ದಾರೆ. 

ಕೇರಳ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಇವರೆಗೆ 123 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಕೇರಳ ಸರ್ಕಾರದ ಜೊತೆ NDRF ಸಿಬ್ಬಂದಿ, ಭಾರತೀಯ ಸೇನೆ, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. 

ಇನ್ನು 400 ಜನ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಮಣ್ಣು ತೆರವು ಕಾರ್ಯಾಚರಣೆ ನಿರಂತರವಾಗಿ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!