ಹುಬ್ಬಳ್ಳಿ ಧಾರವಾಡದ ದಕ್ಷ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅವರು ನಿನ್ನೇ ಧಾರವಾಡದಲ್ಲಿ ನಡೆದಿದ್ದ ಕೃತ್ಯದ ಸ್ಥಳಕ್ಕೆ ಭೇಟಿ ನೀಡಿದರು.
ನಿನ್ನೇ 18 ರಿಂದ 20 ವಯಸ್ಸಿನ 12 ಜನರ ತಂಡ ಕೈಯಲ್ಲಿ ಚಾಕು ಹಿಡಿದು, ಇಸ್ಮಾಯಿಲ್ ತಮಟಗಾರ ಸಹೋದರನ ಮನೆಗೆ ಹೋಗಿ ಬೆದರಿಕೆ ಹಾಕಿದ್ದರು.
ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ ಕಮಿಷನರ್, ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಂದ ಮಾಹಿತಿ ಪಡೆದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
