ಐತಿಹಾಸಿಕ ಕಿತ್ತೂರ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಿತ್ತೂರ ಉತ್ಸವ ಜ್ಯೋತಿ ಇಂದು ಧಾರವಾಡ ಜಿಲ್ಲೆ ಪ್ರವೇಶಿಸಿತು.
ಹಾರೋಬೆಳವಡಿ ಗ್ರಾಮದಲ್ಲಿ ಕಿತ್ತೂರ ಉತ್ಸವ ಜ್ಯೋತಿಗೆ ಸ್ವಾಗತ ಕೋರಲಾಯಿತು.
ತಹಸೀಲ್ದಾರ್ ಹೂಗಾರ, ಕಾಂಗ್ರೇಸ್ ತಾಲೂಕ ಅಧ್ಯಕ್ಷ ಈಶ್ವರ ಶಿವಳ್ಳಿ ಸೇರಿದಂತೆ ಅನೇಕರು ಹಾರೋಬೆಳವಡಿ ಬಳಿ ಜ್ಯೋತಿಯನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ್ಯೆ ಕಾಳವ್ವ ಬಡಿಗೇರ, ಕಾಶಮ್ಮ ಹೊರಗಿನಮಠ, ಈರಣ್ಣ ಏಣಗಿ,ಶಿವಾನಂದ ಬೆಡಸೂರ, ಶಾಂತವ್ವ ಕನಾಜಿ, ಮಹೇಶ ಅಂಗಡಿ, ಶಂಕರ ತೋಟಗೇರ, ಚಂದ್ರಯ್ಯ ಶಿದ್ಧಗಿರಿಮಠ, ಈರಪ್ಪ ಕನಾಜಿ ಸೇರಿದಂತೆ ಹಲವರಿದ್ದರು
