ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಮೂರು ದಿನ ಬಾಕಿ ಇರುತ್ತಿದ್ದಂತೆ ರಾಜಕೀಯ ಗರಿಗೆದರಿದೆ.
ಬಿಜೆಪಿಯಿಂದ ಟಿಕೇಟ್ ಆಕಾಂಕ್ಷಿಯಾಗಿದ್ದ ದುಂಡಿಗೌಡರ ಅವರ ಬದಲಿಗೆ ಬಸವರಾಜ ಬೊಮ್ಮಾಯಿಯವರ ಮಗ ಭರತಗೆ ಟಿಕೇಟ್ ಸಿಗುತ್ತಿದ್ದಂತೆ ಪಂಚಮಸಾಲಿ ಸಮಾಜ ಲೆಕ್ಕಾಚಾರದಲ್ಲಿ ತೊಡಗಿದೆ.
ಪಂಚಮಸಾಲಿ ಸಮಾಜದ ಮುಖಂಡ ಜಿ ಜಿ ದ್ಯಾವನಗೌಡರರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ಪಂಚಮಸಾಲಿ ಸಮಾಜದ ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಂತಹದೊಂದು ಸಂದೇಶ ವೈರಲ್ ಆಗಿದೆ.
ಭರತ ಬೊಮ್ಮಾಯಿಗೆ ಟಿಕೇಟ್ ಘೋಷಣೆಯಾದ ನಂತರ ಅಸಮಾಧಾನ ವ್ಯಕ್ತಪಡಿಸಿದ್ದ ದುಂಡಿಗೌಡರ ಹೇಳಿಕೆ ನಂತರ ದ್ಯಾವನಗೌಡರನ್ನು ನಿಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.