Download Our App

Follow us

Home » Uncategorized » ಸಿ ಎಂ ಜೊತೆ ಜಮೀರ್ ಅಹ್ಮದ್ ಖಾನ್ ಅಭಯ. ಇಸ್ಮಾಯಿಲ್ ತಮಟಗಾರ ಮಧ್ಯಸ್ಥಿಕೆ ಸಕ್ಸಸ್, ಸೋಮವಾರ ಖಾದ್ರಿ ನಾಮಪತ್ರ ವಾಪಸ.

ಸಿ ಎಂ ಜೊತೆ ಜಮೀರ್ ಅಹ್ಮದ್ ಖಾನ್ ಅಭಯ. ಇಸ್ಮಾಯಿಲ್ ತಮಟಗಾರ ಮಧ್ಯಸ್ಥಿಕೆ ಸಕ್ಸಸ್, ಸೋಮವಾರ ಖಾದ್ರಿ ನಾಮಪತ್ರ ವಾಪಸ.

ಶಿಗ್ಗಾವಿ ಕಾಂಗ್ರೇಸ್ ಅಭ್ಯರ್ಥಿ ವಿರುದ್ಧ ಸೆಡ್ಡು ಹೊಡೆದು ಕಣಕ್ಕೆ ಇಳಿದಿದ್ದ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಸೋಮವಾರ ನಾಮಪತ್ರ ವಾಪಸ ಪಡೆಯಲಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸಿ ಎಂ ನಿವಾಸ ಕಾವೇರಿಯಲ್ಲಿ ಸಿ ಎಂ ಸಿದ್ದರಾಮಯ್ಯನವರು ಮತ್ತು ಸಚಿವ ಜಮೀರ ಅಹ್ಮದ ಖಾನ ಅವರು ಮಾತುಕತೆ ನಡೆಸಿ, ನಾಮಪತ್ರ ವಾಪಸ ಪಡೆಯಲು ಮನವೊಲಿಸಿದ್ದಾರೆ. 

ಉತ್ತರ ಕರ್ನಾಟಕದ ಮುಸ್ಲಿಮ್ ಸಮಾಜದ ಪ್ರಭಾವಿ ಪ್ರಭಾವಿ ಮುಖಂಡ ಇಸ್ಮಾಯಿಲ್ ತಮಟಗಾರ ಮಧ್ಯಸ್ಥಿಕೆ ವಹಿಸಿದ ಪರಿಣಾಮ ಈ ಬೆಳವಣಿಗೆ ನಡೆದಿದೆ.

ಖಾದ್ರಿಯವರಿಗೆ ಪ್ರಮುಖ ನಿಗಮ ಮಂಡಳಿ ಕೊಡುವ ಭರವಸೆ ನೀಡಲಾಗಿದ್ದು, ಕಾಂಗ್ರೇಸ್ ಅಭ್ಯರ್ಥಿ ಗೆಲುವಿನ ಹೊಣೆ ಅವರ ಮೇಲೆ ಹೊರಿಸಲಾಗಿದೆ. ಭಿನ್ನಾಭಿಪ್ರಾಯ ಮರೆತು, ಎಲ್ಲರ ವಿಶ್ವಾಸಗಳಿಸಿ ಕೆಲಸ ಮಾಡುವಂತೆ ಸಿ ಎಂ ಸಿದ್ದರಾಮಯ್ಯನವರು ಖಾದ್ರಿಯವರಿಗೆ ಸೂಚನೆ ನೀಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!