ಧಾರವಾಡದಲ್ಲಿ ಅವೈಜ್ಞಾನಿಕವಾಗಿ ಮಾಡಿರುವ ಬಿ ಆರ್ ಟಿ ಎಸ್ ರಸ್ತೆಯಲ್ಲಿ ದಿನಕ್ಕೊಂದು ಅಪಘಾತಗಳು ನಡೆಯುತ್ತಿವೆ.
ಇಂದು ಬೆಳಿಗ್ಗೆ 9 ರ ಸುಮಾರಿಗೆ ಧಾರವಾಡದ ಟೋಲ್ ನಾಕಾ ಬಳಿ ಚಿಗರಿ ಬಸ್ಸು, ಬೈಕ ಸವಾರನಿಗೆ ಗುದ್ದಿದ ಪರಿಣಾಮ ಕಾಲಿಗೆ ಹಾಗೂ ಮುಖಕ್ಕೆ ಗಾಯವಾಗಿದೆ.
ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ರವಾನೆ ಮಾಡಿ, ತನಿಖೆ ಕೈಗೊಂಡಿದ್ದಾರೆ.
