Download Our App

Follow us

Home » ರಾಜಕೀಯ » ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ ವಿಚಾರ ಮಾತಾಡಿದ ಯತ್ನಾಳ. ಜನರಿಂದ ಆಕ್ಷೇಪ. ವೇದಿಕೆಯಿಂದ ಇಳಿದು ಹೊರಟ ಯತ್ನಾಳ

ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ ವಿಚಾರ ಮಾತಾಡಿದ ಯತ್ನಾಳ. ಜನರಿಂದ ಆಕ್ಷೇಪ. ವೇದಿಕೆಯಿಂದ ಇಳಿದು ಹೊರಟ ಯತ್ನಾಳ

ಬಾಗಲಕೋಟ ಜಿಲ್ಲೆಯ ತೇರದಾಳದಲ್ಲಿ ನಿರ್ಮಿಸಿರುವ ಅಲ್ಲಮಪ್ರಭು ದೇವಾಲಯ ಉದ್ಘಾಟನೆ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಜನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಭಾಷಣ ಆರಂಭವಾಗುತ್ತಿದ್ದಂತೆ ವಕ್ಫ ವಿಚಾರ ಹೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಧಾರ್ಮಿಕ ಕಾರ್ಯಕ್ರಮ, ಇಲ್ಲಿ ರಾಜಕೀಯ ಮಾತಾಡದಂತೆ ಸಾರ್ವಜನಿಕರು ತಾಕಿತು ಮಾಡಿದ್ದಾರೆ. 

ಎಲ್ಲಾ ಧರ್ಮದವರು ಸೇರಿ ಸುಮಾರು 6 ಕೋಟಿ ವೆಚ್ಚದಲ್ಲಿ ವಂತಿಗೆ ಸಂಗ್ರಹಿಸಿ ದೇವಸ್ಥಾನ ಕಟ್ಟಿಸಲಾಗಿದೆ. ಇಲ್ಲಿ ನಿಮ್ಮ ರಾಜಕೀಯ ಬೇಡ ಎಂದು ಜನ ತರಾಟೆಗೆ ತೆಗೆದುಕೊಂಡರು. 

ಇದು ರಾಜಕೀಯನಾ ಎಂದು ಜನರಿಗೆ ಪ್ರಶ್ನಿಸಿದ ಬಸನಗೌಡ ಪಾಟೀಲ ಯತ್ನಾಳ, ಹೌದು ನೀವು ರಾಜಕೀಯ ಮಾಡುತ್ತಿದ್ದಿರಿ ಎಂದು ಹೇಳಿದ್ದಾರೆ. 

ಆಯ್ತು ಎಂದ ಬಸನಗೌಡ ಪಾಟೀಲ ಯತ್ನಾಳ ವೇದಿಕೆಯಿಂದ ಇಳಿದು ಹೋದ ಘಟನೆ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ಮಳೆ. ಟಿ ಟಿ ವಾಹನ ಮುಳುಗಡೆ

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸಂಜೆ 6 ರಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ. ಹುಬ್ಬಳ್ಳಿಯ ಗಬ್ಬುರ ಬೈಪಾಸ ಸರ್ವಿಸ

Live Cricket

error: Content is protected !!