Download Our App

Follow us

Home » ರಾಜಕೀಯ » ನವಲಗುಂದ ಬಿಜೆಪಿಯಲ್ಲಿ ಹರಿದಾಡುತ್ತಿದೆ ಇದೊಂದು ಬಹಿರಂಗ ಪತ್ರ. ಸ್ವಯಂ ಘೋಷಿತ ಹಿಂಬಾಲಕರಿಂದ ಎಚ್ಚರ ಇರುವಂತೆ ಮನವಿ

ನವಲಗುಂದ ಬಿಜೆಪಿಯಲ್ಲಿ ಹರಿದಾಡುತ್ತಿದೆ ಇದೊಂದು ಬಹಿರಂಗ ಪತ್ರ. ಸ್ವಯಂ ಘೋಷಿತ ಹಿಂಬಾಲಕರಿಂದ ಎಚ್ಚರ ಇರುವಂತೆ ಮನವಿ

ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರು, ಪಕ್ಷದ ಒಳಗೆ ನಡೆಯುತ್ತಿರುವ ಚಟುವಟಿಕೆಯಿಂದ ಬೇಸತ್ತು ಬರೆದಿರುವ ಬಹಿರಂಗ ಪತ್ರವೊಂದು ನವಲಗುಂದ ಕ್ಷೇತ್ರದ ಬಿಜೆಪಿ ಆವರಣದಲ್ಲಿ ಹರಿದಾಡುತ್ತಿದೆ. 

ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟಿರುವ ಶಂಕರ ಪಾಟೀಲರ ಸುತ್ತ ಕೆಲವು ಸ್ವಯಂ ಘೋಷಿತ ಹಿಂಬಾಲಕರು, ಸಂಬಂಧಿಗಳೆಂದು ಹೇಳಿ ತಿರುಗಾಡುತ್ತಿದ್ದಾರೆ. ಅವರ ಮೇಲೆ ಸ್ವಲ್ಪ ಎಚ್ಚರಿಕೆ ಕಣ್ಣು ಇರಲಿ ಎಂದು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಟಿಕೇಟಗಾಗಿ ಕಾಂಗ್ರೇಸ್ ಮುಖಂಡರ ಜೊತೆ ಅಲೆದಾಡಿ, ಅಲ್ಲಿ ಟಿಕೇಟ ಸಿಗಲ್ಲ ಎಂದುಕೊಂಡು ಇದೀಗ ಬಿಜೆಪಿ ಪಡಸಾಲೆಯಲ್ಲಿ ಶಂಕರ ಪಾಟೀಲರು ನಮ್ಮ ಸಂಬಂಧಿಕರು ಎಂದುಕೊಂಡು ಓಡಾಡುತ್ತಿದ್ದಾರೆ. 

ಇದು ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ಎಂದು ಪತ್ರದಲ್ಲಿ ಹೇಳಿದ್ದು, ಅವರ ಬಗ್ಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!