ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹತ್ಯೆಗೆ ನಡೆದ ಸಂಚು ವಿಫಲವಾಗಿದೆ.
ಸುಖ್ಬೀರ್ ಸಿಂಗ್ ಬಾದಲ್, ಅಮೃತಸರ್ ದ ಗೋಲ್ಡನ್ ಟೆಂಪಲ್ನಲ್ಲಿ ಸೇವೆ ಸಲ್ಲಿಸುತ್ತಿರುವಾಗ, ಎದುರಿಗೆ ಬಂದ ವ್ಯಕ್ತಿ, ಅವರ ಮೇಲೆ ಗುಂಡು ಹಾರಿಸಿದ್ದಾನೆ.
ಅಲ್ಲಿದ್ದವರು,ಕೂಡಲೇ ಸುಖಬೀರ್ ಸಿಂಗ ಬಾದಲ್ ಅವರನ್ನು ಪಕ್ಕಕ್ಕೆ ಸರಿಸಿ, ಅವರ ಪ್ರಾಣ ಉಳಿಸಿದ್ದಾರೆ.
ಶಿರೋಮಣಿ ಅಕಾಲಿದಳದ ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿಯಾಗಿರುವ ಸುಖಬೀರ್ ಸಿಂಗ್ ಬಾದಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸರ್ಕಾರ ಭದ್ರತೆ ಕೊಡಲು ವಿಫಲವಾಗಿದೆ ಎಂದು ಅಕಾಲಿದಳ ಆರೋಪಿಸಿದೆ.
