Download Our App

Follow us

Home » ಕರ್ನಾಟಕ » ಧಾರವಾಡಕ್ಕೆ ಬಂತು ಮತ್ತೊಂದು ಸಹಕಾರಿ ಸಂಘ. ಮುರುಗೇಶ ನಿರಾಣಿಯವರ ವಿಜಯ ಸಹಕಾರಿ ಸಂಘ ಆರಂಭ

ಧಾರವಾಡಕ್ಕೆ ಬಂತು ಮತ್ತೊಂದು ಸಹಕಾರಿ ಸಂಘ. ಮುರುಗೇಶ ನಿರಾಣಿಯವರ ವಿಜಯ ಸಹಕಾರಿ ಸಂಘ ಆರಂಭ

ಶೈಕ್ಷಣಿಕ ಕಾಶಿ ಧಾರವಾಡಕ್ಕೆ ಉತ್ತರ ಕರ್ನಾಟಕದ ಪ್ರತಿಷ್ಟಿತ ಸಹಕಾರಿ ಸಂಘ ಎಂಟ್ರಿ ಕೊಟ್ಟಿದೆ. ಬಿಜೆಪಿ ನಾಯಕ, ಮಾಜಿ ಸಚಿವ ಮುರುಗೇಶ ನಿರಾಣಿ ನೇತೃತ್ವದ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಇಂದು ಉದ್ಘಾಟನೆಯಾಯ್ತು.

ವಿಜಯ ಸೌಹಾರ್ಧ ಕ್ರೆಡಿಟ್ ಸಹಕಾರಿ ಸಂಘದ 65 ನೇ ಶಾಖೆಯನ್ನು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಜಗದೀಶ ಶೆಟ್ಟರ ಉದ್ಘಾಟಿಸಿದರು.

ಇದು 65 ನೇ ಶಾಖೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಉದ್ಘಾಟಿಸಿದರು. ಸಹಕಾರಿ ಕ್ಷೇತ್ರದ ಉಗಮಕ್ಕೆ ಕಾರಣವಾದ ಅವಿಭಾಜಿತ ಧಾರವಾಡ ಜಿಲ್ಲೆಯಲ್ಲಿ ಸಹಕಾರ ಸಂಘಗಳು ದೊಡ್ಡ ಹೆಜ್ಜೆ ಇಟ್ಟಿವೆ. 

ಎರಡು ವರ್ಷಗಳ ಹಿಂದೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಧಾರವಾಡದಲ್ಲಿ ಸಿದ್ದಸಿರಿ ಸಹಕಾರ ಸಂಘ ಆರಂಭಿಸಿದ್ದು, ಇದೀಗ ಮುರುಗೇಶ ನಿರಾಣಿ ಧಾರವಾಡದಲ್ಲಿ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 65 ನೇ ಶಾಖೆಯನ್ನು ಆರಂಭಿಸಿದ್ದಾರೆ.

ಈ ಸಂದರ್ಭದಲ್ಲಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬಿಜೆಪಿ ಅಧ್ಯಕ್ಷನ ಕಪಾಳಕ್ಕೆ ಹೊಡೆದ ಪಿಎಸ್ಐ. ವಿಡಿಯೋ ವೈರಲ್

ಹೋಟೆಲ್ ಬಳಿ ಗುಂಪಾಗಿ ನಿಂತಿದ್ದ ಬಿಜೆಪಿ ಅಧ್ಯಕ್ಷನ ಮೇಲೆ ಪಿಎಸ್ಐ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗದ ತುರುವನೂರು ಬಳಿ ನಡೆದಿದೆ. ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಎಂಬುವವರಿಗೆ

Live Cricket

error: Content is protected !!