Download Our App

Follow us

Home » ಕರ್ನಾಟಕ » ನಾಳಿನ ಪಂಚಮಸಾಲಿ ಹೋರಾಟಕ್ಕೆ ಬೆಂಬಲವಿಲ್ಲ / ವಿಜಯಾನಂದ ಕಾಶಪ್ಪನವರ ಹೇಳಿಕೆ

ನಾಳಿನ ಪಂಚಮಸಾಲಿ ಹೋರಾಟಕ್ಕೆ ಬೆಂಬಲವಿಲ್ಲ / ವಿಜಯಾನಂದ ಕಾಶಪ್ಪನವರ ಹೇಳಿಕೆ

ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿದ್ದ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಬಣಗಳು ಸೃಷ್ಟಿಯಾಗಿವೆ.

ನಾಳೆ ಬೆಳಗಾವಿಯಲ್ಲಿ ನಡೆಯಲಿರುವ ಪಂಚಮಸಾಲಿ ಹೋರಾಟ ಒಂದು ಪಕ್ಷಕ್ಕೆ ಮತ್ತು ಒಬ್ಬ ವ್ಯಕ್ತಿಯನ್ನು ಬೆಳೆಸಲು ನಡೆಯುವ ಹೋರಾಟವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ. 

ಬೆಳಗಾವಿಯಲ್ಲಿ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ಕೊಟ್ಟಿರುವ ಅವರು ನಾಳಿನ ಪಂಚಮಸಾಲಿ ಹೋರಾಟದಲ್ಲಿ ನಾವು ಬಾಗವಹಿಸುವದಿಲ್ಲ ಎಂದು ವಿಜಯಾನಂದ ಕಾಶಪ್ಪನವರ ಸ್ಪಷ್ಟಪಡಿಸಿದ್ದಾರೆ.

ಪಂಚಮಸಾಲಿ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ನಾಳೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಕರೆ ನೀಡಿದ್ದು, ಮೀಸಲಾತಿ ಹೋರಾಟದಲ್ಲಿ ಬಣ ಬಡಿದಾಟ ತಾರಕಕ್ಕೇರಿದೆ. 

ವಿಜಯಪೂರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಾಳಿನ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ಕೊಟ್ಟರೆ, ವಿಜಯಾನಂದ ಕಾಶಪ್ಪನವರ ಹೋರಾಟದಲ್ಲಿ ಭಾಗವಹಿಸಲ್ಲ ಎಂದು ಹೇಳಿದ್ದಾರೆ.

ಮೀಸಲಾತಿಗಾಗಿ ಪಕ್ಷಾತೀತ ಹೋರಾಟ ನಡೆಯುವ ಬದಲು, ನಾಳಿನ ಹೋರಾಟ ಒಂದು ಪಕ್ಷಕ್ಕೆ ಸೀಮಿತವಾಗಿದೆ ಎಂದು ವಿಜಯಾನಂದ ಕಾಶಪ್ಪನವರ ಕಿಡಿ ಕಾರಿದ್ದಾರೆ.

Karnataka Files
Author: Karnataka Files

1 thought on “ನಾಳಿನ ಪಂಚಮಸಾಲಿ ಹೋರಾಟಕ್ಕೆ ಬೆಂಬಲವಿಲ್ಲ / ವಿಜಯಾನಂದ ಕಾಶಪ್ಪನವರ ಹೇಳಿಕೆ”

  1. ಇದು ಸರಿಯಾದ ನಿಧಾ೯ರ ,ಯಾಕೆಂದರೆ ,ಯಾವುದೇ ಮಿಸಲಾತಿಯನ್ನು ಘೋಷಣೆ ಮಾಡಬೇಕಾದರೆ,ಕಾನೂನಿನ ಪ್ರಕಾರ ,ಜಾತಿಗಳನ್ನು ಆಧರಿಸಿ ಮಿಸಲಾತಿ ಕೊಡಲಾಗದು ,ಈ ಹಿಂದೆ ಕೋಟ್ಟಿರುವ 2A ಮೀಸಲಾತಿ ಗಳು ಹಿಂದುಳಿದ ಕಾಯಕ/ಕಸುಬುಗಳನ್ನು ಆಧರಿಸಿ ಕೊಡಲಾಗಿದೆ ಉದಾ:- ಗಾಣಿಗ,ಮಡಿವಾಳ,ಕುರುಬ,ಇತ್ಯಾದಿಗಳು ಹಿಂದುಳಿದ ಕಸುಬುಗಳಾಗಿದ್ದು ಇವುಗಳನ್ನಾದರಿಸಿ ಕೊಡಲಾಗಿದೆ, ಇತ್ತೀಚಗೆ,ಜಗದೀಶ್ ಶೆಟ್ಟರ್ ಬಣಜಿಗರಿಗೆ ಕೊಟ್ಟರೂ ,ಅದು ಅಮಾನ್ಯವಾಗಿದ್ದು ಕಾನೂನಿನ ತೊಡಕಿನಿಂದ ,& ಈ ಹಿಂದೆ ಬೊಮ್ಮಾಯಿ ಸರಕಾರ 2D ಯಂಬ ಮೀಸಲಾತಿಯನ್ನು ತರಾತುರಿಯಲ್ಲಿ ಘೋಷಣೆ ಮಾಡಿದರು ,ಅದೂ ಅಮಾನ್ಯವಾಯಿತು (ತಡೆಯಾಜ್ಞೆ ಗೆ ಕಾನೂನಿನ ವಿಷಯದಿಂದ) .
    ಆದ್ದರಿಂದ ಈ ಹೋರಾಟ ಮಾಡಬೇಕಿರುವುದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದರಿಂದ ಯಾವ ಸರ್ಕಾರವೂ ಶಾಶ್ವತ ಪರಿಹಾರ ರೂಪದಲ್ಲಿ ಮಿಸಲಾತಿ ಸಿಗುವುದಿಲ್ಲಾ .
    ಬದಲಾಗಿ ಪಂಚಮಸಾಲಿ ಸಮಾಜದ ಮೂಲ ಕಸುಬಿನಲ್ಲಿ ಯಾವರೀತಿಯಲ್ಲಿ ಹಿಂದುಳಿದಿದೆ ಎಂಬುದನ್ನು ಸಾಬೀತುಪಡಿಸಲು ಸವೆ೯ಮಾಡಿದ ವರಧಿಯನ್ನು ಹಿಂದುಳಿದ ಆಯೋಗಕ್ಕೆ , ಕಳಿಸಬೇಕು, ಆ ವರದಿ ಆಧಾರದ ಮೇಲೆ, ಆಯೋಗವು, 10% ಪರಿಶೀಲನೆ ಮಾಡುತ್ತದೆ, ಆಯೋಗದ ಪರಿಶೀಲನ ವರದಿಯ ಪ್ರಕಾರ, ಸರ್ಕಾರ ಮೀಸಲಾತಿಯನ್ನು ಘೋಷಣೆ ಮಾಡಬಹುದು.

    Reply

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ಮಳೆ. ಟಿ ಟಿ ವಾಹನ ಮುಳುಗಡೆ

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸಂಜೆ 6 ರಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ. ಹುಬ್ಬಳ್ಳಿಯ ಗಬ್ಬುರ ಬೈಪಾಸ ಸರ್ವಿಸ

Live Cricket

error: Content is protected !!