Download Our App

Follow us

Home » ಕರ್ನಾಟಕ » ಪಂಚಮಸಾಲಿ ಹೋರಾಟ. ಲಾಠಿ ಚಾರ್ಜ್ ಸಮರ್ಥಿಸಿಕೊಂಡ ಬೆಳಗಾವಿ ಜಿಲ್ಲಾಡಳಿತ. ದನಕ್ಕೆ ಬಡಿದಂತೆ ಬಡಿದರು ಎಂದ ಸ್ವಾಮೀಜಿ

ಪಂಚಮಸಾಲಿ ಹೋರಾಟ. ಲಾಠಿ ಚಾರ್ಜ್ ಸಮರ್ಥಿಸಿಕೊಂಡ ಬೆಳಗಾವಿ ಜಿಲ್ಲಾಡಳಿತ. ದನಕ್ಕೆ ಬಡಿದಂತೆ ಬಡಿದರು ಎಂದ ಸ್ವಾಮೀಜಿ

ಪಂಚಮಸಾಲಿ ‌ಮೀಸಲಾತಿ ಹೋರಾಟಗಾರರು, ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಬಲ ಪ್ರಯೋಗ ಮಾಡಬೇಕಾದ ಅನಿವಾರ್ಯತೆ ಬಂತು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ, ಲಾಠಿ ಚಾರ್ಜ್ ಮಾಡುವ ಅನಿವಾರ್ಯತೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಹೈಕೋರ್ಟ ಆದೇಶದಂತೆ ಪಂಚಮಸಾಲಿ ಸಮಾಜದವರಿಗೆ ಪ್ರತಿಭಟನೆ ನಡೆಸಲು ಎಲ್ಲಾ ತರದ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ರು. ಮಧ್ಯಾಹ್ನದ ಬಳಿಕ ಒಂದು ಗುಂಪು ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದ ನಂತರ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾಯಿತು ಎಂದು ಹೇಳಿದರು.

ಏಕಾಏಕಿ ದೊಡ್ಡ ಸಂಖ್ಯೆಯಲ್ಲಿ ಬಂದ ಪ್ರತಿಭಟನಾಕಾರರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬಂದಾಗ ಅವರನ್ನು ತಡೆಯುವ ಪ್ರಯತ್ನ ಮಾಡಲಾಯಿತು ಎಂದು ಎ ಡಿ ಜಿ ಪಿ ಹಿತೆಂದ್ರ ಹೇಳಿದ್ದಾರೆ. 

ಗಲಭೆಯಲ್ಲಿ 14 ಪೊಲೀಸರಿಗೆ ಗಾಯಗಳಾಗಿದ್ದು, 11 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 80 ಜನರನ್ನು ವಶಕ್ಕೆ ಪಡೆಯಲಾಗಿದ್ದು, ದೂರು ಧಾಖಲು ಮಾಡಲಾಗಿದೆ. 

ಮತ್ತೊಂದೆಡೆ ಪಂಚಮಸಾಲಿ ಮುಖಂಡರು ಲಾಠಿ ಚಾರ್ಚ್ ಮಾಡಲು ಅನುಮತಿ ಕೊಟ್ಟಿರುವ ಎ ಡಿ ಜಿ ಪಿ ಹಾಗೂ ಪೂಲೀಸ್ ಕಮಿಷನರ ಅಮಾನತ್ ಮಾಡುವಂತೆ ಆಗ್ರಹಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!