Download Our App

Follow us

Home » ಭಾರತ » ಸಂಗೀತ ಮಾಂತ್ರಿಕ, ಇಳಿಯರಾಜರಿಗೆ ಅಪಮಾನ. ದೇವಸ್ಥಾನ ಪ್ರವೇಶಕ್ಕೆ ನಿರಾಕರಣೆ

ಸಂಗೀತ ಮಾಂತ್ರಿಕ, ಇಳಿಯರಾಜರಿಗೆ ಅಪಮಾನ. ದೇವಸ್ಥಾನ ಪ್ರವೇಶಕ್ಕೆ ನಿರಾಕರಣೆ

ಸಂಗೀತ ಮಾಂತ್ರಿಕ, ಹಾಲಿ ರಾಜ್ಯ ಸಭಾ ಸದಸ್ಯರಾದ ಇಳಯರಾಜ ಅವರನ್ನು ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಪ್ರವೇಶ ಮಾಡಲು ನಿರಾಕರಿಸಿದ ಘಟನೆ ನಡೆದಿದೆ. 

ಇದು ನಿಜಕ್ಕೂ ಅವಮಾನಕರ ಸಂಗತಿ ಆಗಿದ್ದು, ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ ಎಂದು ಸಚಿವ ಎಚ್ ಸಿ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದವರ ಸ್ಥಿತಿಯೇ ಹೀಗಿದ್ದರೆ, ಸಾಮಾನ್ಯರಾಗಿ ಜೀವಿಸುತ್ತಿರುವ ಪರಿಶಿಷ್ಟ ಸಮುದಾಯಗಳ ಪರಿಸ್ಥಿತಿ ಏನಾಗಿರಬೇಕು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಹಾದೇವಪ್ಪನವರು ಹೇಳಿದ್ದಾರೆ.

ದೇಗುಲದ ಗರ್ಭಗುಡಿಯಿಂದ ಇಳಯರಾಜರನ್ನು ದೂರ ನಿಲ್ಲುವಂತೆ ಹೇಳಲಾಗಿದೆ. ಪ್ರಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ತಮಿಳುನಾಡಿನ ವಿರುಧು ನಗರದ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನಕ್ಕೆ ಹೋದಾಗ  ಈ ಘಟನೆ ನಡೆದಿದೆ. ದೇವಸ್ಥಾನ  ಪ್ರವೇಶಿಸದಂತೆ ತಡೆದು, ದೇವಾಲಯದ ಬಾಗಿಲಿನಲ್ಲೇ ಸನ್ಮಾನಿಸಿ ಅವರನ್ನು ಕಳಿಸಲಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!