Download Our App

Follow us

Home » ಕರ್ನಾಟಕ » ಧಾರವಾಡ ಜಿಲ್ಲೆಯ ಈ ನಗರದಲ್ಲಿ 24 ಘಂಟೆಯೂ ಸಿಗತ್ತೆ ಸಾರಾಯಿ….. ಪೊಲೀಸರಿಗೂ ಗೊತ್ತು, ಅವರ ಗತ್ತು….

ಧಾರವಾಡ ಜಿಲ್ಲೆಯ ಈ ನಗರದಲ್ಲಿ 24 ಘಂಟೆಯೂ ಸಿಗತ್ತೆ ಸಾರಾಯಿ….. ಪೊಲೀಸರಿಗೂ ಗೊತ್ತು, ಅವರ ಗತ್ತು….

ರೈತ ಬಂಡಾಯದ ನಾಡು ನವಲಗುಂದ ಇದೀಗ ದೋ ನಂಬರ್ ದಂಧೆಗೆ ಹೇಳಿ ಮಾಡಿಸಿದಂತಿದೆ. 

ಆಕ್ರಮ ಸಾರಾಯಿಗೆ ಫೇಮಸ್ ಆಗಿದ್ದ ಹುಬ್ಬಳ್ಳಿ ಕಮರಿಪೇಟೆ, ಸುಧಾರಿಸ ತೊಡಗಿದ್ದರೆ, ನವಲಗುಂದದಲ್ಲಿ ಮಾತ್ರ 24 ಘಂಟೆ ಸಾರಾಯಿ ಸುಲಭವಾಗಿ ಸಿಗುತ್ತದೆ.

ಹುಬ್ಬಳ್ಳಿಯಿಂದ ನವಲಗುಂದಕ್ಕೆ ಎಂಟ್ರಿಯಾಗುತ್ತಿದ್ದಂತೆ ಸಾರಾಯಿ ವಾಸನೆ ಬಡೆಯುತ್ತದೆ. ನವಲಗುಂದದಿಂದ ಹಳ್ಳಿಗಳಿಗೂ ಸಾರಾಯಿ ಸಾಗಾಟವಾಗುತ್ತದೆ. 

ಆಕ್ರಮ ಸಾರಾಯಿ ಮಾರಾಟ ಗೊತ್ತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಸುಮ್ಮನೇ ಕುಳಿತಿರುವದು ಸಂಶಯಕ್ಕೆಡೆ ಮಾಡಿದೆ. 

ಕಳೆದ 6 ತಿಂಗಳಲ್ಲಿ ಕುಡಿತದ ಚಟಕ್ಕೆ, ನವಲಗುಂದ ನಗರದಲ್ಲಿಯೇ 5 ಕ್ಕೂ ಹೆಚ್ಚು ಯುವಕರು ಬಲಿಯಾಗಿದ್ದಾರೆ. ದಿನದ 24 ತಾಸು, ಸಾರಾಯಿ ಸಿಗುವದರಿಂದ, ಯುವಕರು ದಾರಿ ತಪ್ಪುತ್ತಿದ್ದಾರೆ. 

ಆಕ್ರಮ ಸಾರಾಯಿ ಜೊತೆ ನವಲಗುಂದದಲ್ಲಿ ಓ ಸಿ, ಇಸ್ಪೇಟ್, ಗಾಂಜಾ ಹಾವಳಿ ಮಿತಿ ಮೀರಿದೆ. ಈ ವಿಷಯ ಕ್ರೈಮ್ ಹಾಗೂ ಎಸ್ ಬಿ ಡ್ಯೂಟಿ ಮಾಡುವ ಕೆಲ ಪೊಲೀಸರಿಗೂ ಗೊತ್ತಿದೆ. 

ಶಾಂತಿ, ಸೌಹಾರ್ಧತೆಗೆ ಹೆಸರಾದ, ಧಾರವಾಡ ಜಿಲ್ಲೆಯ ನವಲಗುಂದ, ಕ್ರಮೇಣ ಹದಗೆಡುತ್ತಿದೆ. ಶಾಸಕ ಎನ್ ಎಚ್ ಕೋನರೆಡ್ಡಿಯವರು, ಅಧಿಕಾರಿಗಳ ಸಭೆ ಕರೆದು, ಬೆಂಬಲಿಗರು, ಅಭಿಮಾನಿಗಳು ಎಂದು ನೋಡದೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಲ್ಲಿ ನವಲಗುಂದ ಸುಧಾರಣೆ ಕಾಣಬಹುದು.

ಅಬಕಾರಿ, ಪೊಲೀಸ್ ಅಧಿಕಾರಿಗಳು, ವರ್ಗಾವಣೆಯಾಗಿ ಬರಲು ಹಣ ಕೊಟ್ಟು ಬಂದಾಗ ಇವೆಲ್ಲ ಸಹಜ ಅಂತಾ ಜನ ಮಾತನಾಡಿಕೊಳ್ಳುವ ಮುನ್ನ ಶಾಸಕರು ಎಚ್ಚೆತ್ತುಕೊಳ್ಳಲಿ. ಅಧಿಕಾರಿಗಳ ಸಭೆ ನಡೆಸಿ, ಯುವಕರ ಜೀವ ಉಳಿಸಲಿ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!