Download Our App

Follow us

Home » ಅಪಘಾತ » ನವದೆಹಲಿ ರೈಲ್ವೇ ನಿಲ್ದಾಣದಲ್ಲಿ 18 ಜನರ ಸಾವು. ಕುಂಭಮೇಳಕ್ಕೆ ಹೊರಟಾಗ ನಡೆದ ಘಟನೆ

ನವದೆಹಲಿ ರೈಲ್ವೇ ನಿಲ್ದಾಣದಲ್ಲಿ 18 ಜನರ ಸಾವು. ಕುಂಭಮೇಳಕ್ಕೆ ಹೊರಟಾಗ ನಡೆದ ಘಟನೆ

ದೆಹಲಿ ರೈಲು ನಿಲ್ದಾಣದಲ್ಲಿ ಭೀಕರ ದುರಂತ ನಡೆದಿದೆ. ರೇಲ್ವೆ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷದಿಂದ ಕಾಲ್ತುಳಿತ ಸಂಭವಿಸಿ 18 ಜನ ಪ್ರಾಣ ಕಳೆದುಕೊಂಡಿದ್ದಾರೆ. 

ನವದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಗರಾಜಗೆ ಹೋಗಲು ಸಿದ್ದರಾಗಿ ನಿಂತಿದ್ದರು. ರೈಲು ಬಹಳಷ್ಟು ತಡವಾಗಿದ್ದರಿಂದ ಪ್ರಯಾಣಿಕರು ಸುಸ್ತು ಹೊಡೆದಿದ್ದರು. 

ಇನ್ನೇನು ರೈಲು ಬಂತು ಅನ್ನುವಷ್ಟರಲ್ಲಿ ಮೈಕ್ ನಲ್ಲಿ ಪ್ರಯಾಗರಾಜ ಹೋಗುವ ರೈಲು ಪ್ಲಾಟ್ ಫಾರ್ಮ್ 12 ರ ಬದಲು 16 ಕ್ಕೆ ಬರಲಿದೆ ಎಂದು ಹೇಳಿದ್ದೆ ತಡ ಎಲ್ಲರು, ಓಡೋಡಿ ಹೋಗಿದ್ದಾರೆ. 

ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ, 18 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ. 

ದುರಂತಕ್ಕೆ ಸಂಬಂಧಿಸಿದಂತೆ ರೈಲ್ವೇ ಇಲಾಖೆ ತನಿಖೆಗೆ ಆದೇಶ ನೀಡಿದೆ. ಪ್ರಯಾಗರಾಜಗೆ ಸಾಕಷ್ಟು ಸಂಖ್ಯೆಯಲ್ಲಿ ರೈಲು ಬಿಡದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಪ್ರಯಾಗರಾಜದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಲ್ಲಾದ ಜೋಶಿ ಕುಟುಂಬ

ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವವಾಗಿರುವ ಕುಂಭಮೇಳದಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಜೋಶಿಯವರ ಧರ್ಮಪತ್ನಿ, ಸಹೋದರರು, ಮಕ್ಕಳು ಹಾಗೂ ಅಳಿಯಂದಿರು

Live Cricket

error: Content is protected !!