Download Our App

Follow us

Home » ರಾಜಕೀಯ » ರಮೇಶ ಜಾರಕಿಹೊಳಿರನ್ನು ಕಾಂಗ್ರೇಸ್ಸಿಗೆ ಕರೆತರಲು ನಡಿತಿದೆ ಲಾಭಿ

ರಮೇಶ ಜಾರಕಿಹೊಳಿರನ್ನು ಕಾಂಗ್ರೇಸ್ಸಿಗೆ ಕರೆತರಲು ನಡಿತಿದೆ ಲಾಭಿ

ಬಿಜೆಪಿ ನಾಯಕತ್ವದ ಆಂತರಿಕ ಕದನ ಮುಂದುವರೆದಿದ್ದು, ಯತ್ನಾಳ ಬಣದಲ್ಲಿ ಗುರುತಿಸಿಕೊಂಡಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರನ್ನು ಮರಳಿ ಕಾಂಗ್ರೇಸ್ಸಿಗೆ ಕರೆತರಲು ಲಾಭಿ ನಡೆದಿದೆ ಎನ್ನಲಾಗಿದೆ. 

ಮೊನ್ನೆ ಬೆಳಗಾವಿಯಲ್ಲಿ ಶಾಸಕ ಸೇಠರ ಮಗನ ಮದುವೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಮೇಶ ಜಾರಕಿಹೊಳಿ ಎದುರು ಬದುರಾಗಿದ್ದು, ಕಾಂಗ್ರೇಸ್ಸಿಗೆ ಬರುವಂತೆ ಬೆಳಗಾವಿಯ ಓರ್ವ ಶಾಸಕರು ಸಿ ಎಮ್ ಎದುರೇ ಆಹ್ವಾನ ನೀಡಿದ್ದಾರೆ. 

ಯತ್ನಾಳರನ್ನು ಬಿಜೆಪಿ ಉಚ್ಚಾಟನೆ ಮಾಡಿದ್ದು, ಅವರ ಜೊತೆಗಿದ್ದ ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ ತಟಸ್ಥರಾಗಿದ್ದಾರೆ.

ರಮೇಶ ಜಾರಕಿಹೊಳಿ ಬಿಜೆಪಿಯಲ್ಲಿದ್ದರು ಸಹ, ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹಲವು ಸಲ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯನವರ ಜೊತೆ ಉತ್ತಮ ಬಾಂದವ್ಯ ಹೊಂದಿರುವ ರಮೇಶ ಜಾರಕಿಹೊಳಿ ಮತ್ತೆ ಕಾಂಗ್ರೇಸ್ ಸೇರ್ಪಡೆಯಾಗ್ತಾರೆ ಅನ್ನೋ ಮಾತುಗಳು ಕಾಂಗ್ರೇಸ್ ವಲಯದಲ್ಲಿ ಕೇಳಿ ಬರುತ್ತಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹೊರರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರಿಂದ ಅಪರಾಧಗಳ ಸಂಖ್ಯೆ ಹೆಚ್ಚಳ / ಕಟ್ಟೆಚ್ಚರ ವಹಿಸಲು ಸರ್ಕಾರ ನಿರ್ಧಾರ

ಇತ್ತೀಚೆಗೆ ಹೊರರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರಿಂದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವ ಸಂಗತಿಯನ್ನು ಕಾರ್ಮಿಕ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ

Live Cricket

error: Content is protected !!