ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡಿರುವ, ರಾಜ್ಯದ ಅಪರೂಪದ ರಾಜಕಾರಣಿ ಬಿ ಝೆಡ್ ಜಮೀರ ಅಹ್ಮದ್ ಖಾನ್, ಚಿಕಿತ್ಸೆಗೆಂದು 2 ವರ್ಷದ ಬಾಲಕಿಗೆ 25 ಲಕ್ಷದ ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ಮೈಸೂರು ನಗರದ ಕಿಶೋರ್ ಮತ್ತು ನಾಗಶ್ರೀ ದಂಪತಿಗಳ ಪುತ್ರಿ 2 ವರ್ಷದ ಕೀರ್ತನಾ ಅವರ ಚಿಕಿತ್ಸೆಗಾಗಿ ವೈಯಕ್ತಿಕವಾಗಿ 25 ಲಕ್ಷ ರೂ.ಗಳ ಚೆಕ್ ಅನ್ನು ನೀಡಿದರು.
ಅವರ ಮಗಳು ಆನುವಂಶಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸಾ ವೆಚ್ಚ 16 ಕೋಟಿ ರೂ.ಗಳಾಗಿದೆ ಎಂದು ಹೇಳಲಾಗಿದೆ.
ಮುಸ್ತಫಾ ಕುನ್ನಿಭಾವಿ ( ಧಾರವಾಡ )
