ನಿನ್ನೇ ಹಾಡುಹಗಲೇ ಕೊಲೆಯಾಗಿದ್ದ ಶಿಗ್ಗಾವಿಯ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಕುನ್ನೂರನ ಕೊಲೆ ಆರೋಪಿ ಮನೆಗೆ ಬೆಂಕಿ ಹಾಕಲಾಗಿದೆ.
ಪ್ರಮುಖ ಆರೋಪಿ ನಾಗರಾಜ ಸವದತ್ತಿ ಎಂಬಾತನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಬೆಂಕಿ ಬಿದ್ದಾಗ, ಅದೃಷ್ಟಾವಶಾತ ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ ಸವದತ್ತಿ, ಹನುಮಂತ್, ಅಶ್ರಫ್, ಸುದೀಪ್ ಮತ್ತು ಸುರೇಶ್ ಎಂಬುವವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
