ಶಿಗ್ಗಾವಿಯ ಜನನಿಬೀಡ ರಸ್ತೆಯಲ್ಲಿ ಹಾಡುಹಗಲೇ ಭೀಕರ ಕೊಲೆಯೊಂದು ನಡೆದಿದೆ.
ಶಿಗ್ಗಾವಿಯ ಮಹಾಲಕ್ಷ್ಮಿ ಹೊಂಡಾ ಶೋರೂಮ್ ಎದುರು ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದ ಶಿವಾನಂದ ಕುನ್ನೂರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಆಸ್ತಿ ವಿಚಾರವಾಗಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
