Download Our App

Follow us

Home » ಕಾನೂನು » ಹಳೇ ವೈಷಮ್ಯ, ಕಲಬುರಗಿಯಲ್ಲಿ ಮೂವರ ಮರ್ಡರ್…..

ಹಳೇ ವೈಷಮ್ಯ, ಕಲಬುರಗಿಯಲ್ಲಿ ಮೂವರ ಮರ್ಡರ್…..

ಕಲಬುರಗಿ ಹೊರವಲಯದಲ್ಲಿರುವ ದಾಬಾ ವೊಂದರಲ್ಲಿ ಮೂವರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. 

ಬೆಳಗಿನ ಜಾವ ಈ ಘಟನೆ ನಡೆದಿದ್ದು, ಸಿದ್ಧಾರೋಡ, ಜಗದೀಶ್ ಮತ್ತು ರಾಮು ಎಂಬ ಮೂವರನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ.

ಸಿದ್ದಾರೋಡ ಎಂಬಾತ ದಾಬಾ ನಡೆಸುತ್ತಿದ್ದ ಎನ್ನಲಾಗಿದೆ. ಸಿದ್ಧಾರೋಡನ ಜೊತೆ ಜಗದೀಶ್ ಹಾಗೂ ರಾಮು ಅಲ್ಲಿಯೇ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. 

ಸುದ್ದಿ ತಿಳಿಯುತ್ತಿದ್ದಂತೆ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಕೊಲೆಯಾದವನ ಪೈಕಿ ಒಬ್ಬಾತ ಕೊಲೆ ಪ್ರಕರಣವೊಂದರ ಆರೋಪಿ ಎಂದು ತಿಳಿದುಬಂದಿದೆ. ಹಳೆಯ ವೈಷಮ್ಯದಿಂದಾಗಿ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಛೇ ! ಮದುವೆಯಾಗಲು ಕನ್ಯೆ ಸಿಗಲೇ ಇಲ್ಲ. ಕಡೆಗೆ ಆತ್ಮಹತ್ಯೆಗೆ ಶರಣಾದ ಯುವಕ

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.  ಡ್ರೈವರ್ ಕೆಲಸ ಮಾಡಿಕೊಂಡ ಜೀವನ ಮಾಡುತ್ತಿದ್ದ ಅವಿನಾಶ್ ಚಾವಡಿ ಎಂಬಾತ ಮದುವೆಯಾಗಲು ಕನ್ಯೆ

Live Cricket

error: Content is protected !!