ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ಡ್ರೈವರ್ ಕೆಲಸ ಮಾಡಿಕೊಂಡ ಜೀವನ ಮಾಡುತ್ತಿದ್ದ ಅವಿನಾಶ್ ಚಾವಡಿ ಎಂಬಾತ ಮದುವೆಯಾಗಲು ಕನ್ಯೆ ಸಿಗಲಿಲ್ಲ ಅನ್ನೋ ಕಾರಣಕ್ಕೆ ನೇಣಿಗೆ ಶರಣಾಗಿದ್ದಾನೆ.
ತಮ್ಮೂರಿನಲ್ಲಿ ತಮ್ಮ ವಯಸ್ಸಿನಲ್ಲಿ ಯುವಕರು ಮದುವೆಯಾಗಿದ್ದಾರೆ. ನನಗ್ಯಾಕೆ ಹುಡುಗಿ ಸಿಗುತ್ತಿಲ್ಲ ಎಂದು ಜಿಗುಪ್ಸೆಗೊಂಡಿದ್ದ.
ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ಧಾಖಲು ಮಾಡಿಕೊಂಡಿದ್ದಾರೆ.
