Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ನೇಣಿಗೆ ಶರಣಾದ ಪ್ರಾಂಶುಪಾಲ. ಸಾವಿನ ಸುತ್ತ ಅನುಮಾನದ ಹುತ್ತ.

ಸರ್ಕಾರಿ ಕಾಲೇಜಿನ ಪ್ರಾಂಶುಪಾಲ, ಕಾಲೇಜಿನಲ್ಲಿಯೇ ನೇಣಿಗೆ ಶರಣಾದ ಘಟನೆ ಬಾಗಲಕೋಟ ಜಿಲ್ಲೆಯ ಹುನಗುಂದದಲ್ಲಿ ನಡೆದಿದೆ. ನಾಗರಾಜ ಮುದಗಲ್ ಎಎಂಬುವವರು ಮೃತ ದುರ್ದೈವಿಯಾಗಿದ್ದಾರೆ.

ನಿನ್ನೇ ರಾತ್ರಿಯಿಡಿ ಕಾಲೇಜಿನಲ್ಲಿ “ಹೊನ್ನ ಸಂಭ್ರಮ” ಕಾರ್ಯಕ್ರಮದ ತಯಾರಿ ನಡೆಸಿ ನಾಗರಾಜ, ರಾತ್ರಿ 1 ಘಂಟೆಗೆ ಮನೆಗೆ ಬಂದಿದ್ದರಂತೆ. ಮತ್ತೆ ಇಂದು ಬೆಳಿಗ್ಗೆ 6-30 ರ ಸುಮಾರಿಗೆ ಕಾಲೇಜಿನಲ್ಲಿ ಕಾರ್ಯಕ್ರಮ ಇದೆ ಎಂದು ಹೇಳಿ ಕಾಲೇಜಿಗೆ ಹೋಗಿದ್ದರಂತೆ. ಬೆಳಿಗ್ಗೆ ಕಾಲೇಜಿಗೆ ಹೋಗಿದ್ದ ನಾಗರಾಜ ಮುದಗಲ್, ಮೆಟ್ಟಲುಗಳ ಕಬ್ಬಿಣದ ಸಳಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಕಾರ್ಯಕ್ರಮದ ಹಿನ್ನೇಲೆಯಲ್ಲಿ ನಿನ್ನೇ ರಾತ್ರಿ ಶಾಸಕರನ್ನು ಭೇಟಿ ಮಾಡಿ ಬಂದಿದ್ದರೆಂದು ಮೃತ ನಾಗರಾಜ ಅವರ ಹೆಂಡತಿ ವಿಜಯಲಕ್ಷ್ಮಿ ತಿಳಿಸಿದ್ದಾರೆ. ಇಂದು ಕಾಲೇಜಿನಲ್ಲಿ ನಡೆಯಬೇಕಿದ್ದ ಹೊನ್ನ ಸಂಭ್ರಮ ಕಾರ್ಯಕ್ರಮ ಸಾವಿಗೆ ಕಾರಣವಾಯಿತೆ ಅನ್ನೋ ಅನುಮಾನ ಮೂಡಿದೆ.ಸಾವಿನ ಸುತ್ತ ಅನುಮಾನದ ಹುತ್ತ ಸೃಷ್ಟಿಯಾಗಿದೆ.

ಸಾವಿನ ಹಿಂದೆ ಸಂಶಯ ವ್ಯಕ್ತಪಡಿಸಿ, ವಿಜಯಲಕ್ಸ್ಮಿ ಪೊಲೀಸ್ ಠಾಣೆಗೆ ದೂರು ಕೊಟ್ಟ ಪ್ರತಿ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!