Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಸ್ಪೋಟಕ ಪತ್ತೆ ಮತ್ತು ಕೊಲೆ ಕೇಸ್ ಪತ್ತೆ ಹಚ್ಚಿದ್ದ ಶ್ವಾನ “ಸೌಮ್ಯ” ಇನ್ನಿಲ್ಲ

ವಿಧ್ವಂಸಕ ಕೃತ್ಯ ತಡೆ, ಸ್ಪೋಟಕ ಪತ್ತೆಯಲ್ಲಿ ಸೈ ಎನಿಸಿಕೊಂಡಿದ್ದ ದಾವಣಗೆರೆಯ ಪೊಲೀಸ ಶ್ವಾನ ಇಂದು ಉಸಿರು ನಿಲ್ಲಿಸಿತು. ಗಣ್ಯಾತಿಗಣ್ಯರ ಭದ್ರತಾ ಕಾರ್ಯ ಕೈಗೊಂಡಿದ್ದ ಜಿಲ್ಲಾ ಪೊಲೀಸ್ ಶ್ವಾನದಳದ ಸೌಮ್ಯಾ ಹೆಸರಿನ ಶ್ವಾನ ಒಂದು ವಾರದಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ಸೌಮ್ಯ ಮೃತಪಟ್ಟ ಹಿನ್ನೆಲೆಯಲ್ಲಿ ಇಲಾಖೆಯಿಂದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆದ ಡಿವೈಎಸ್ಪಿ ಪ್ರಕಾಶ್ ಸೇರಿ ಅಧಿಕಾರಿ, ಸಿಬ್ಬಂದಿ ತಮ್ಮ ಇಲಾಖೆಯ ಶ್ವಾನ ಸೌಮ್ಯಾ ಅಗಲಿಕೆಗೆ ಕಂಬನಿ ಮಿಡಿದು, ಅಂತಿಮ ಗೌರವ ಸಲ್ಲಿಸಿದರು.

ಅಗಲಿದ ಶ್ವಾನ ಪಾರ್ಥಿವ ಶರೀರಕ್ಕೆ ಹಾರ ಇಟ್ಟು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಡಿಎಆರ್‌ ಡಿವೈಎಸ್ಪಿ ಪ್ರಕಾಶ್ ಸೇರಿ ಅಧಿಕಾರಿ ಸಿಬ್ಬಂದಿ ಸೆಲ್ಯೂಟ್ ಮೂಲಕ ಅಂತಿಮ ನಮನ ಸಲ್ಲಿಸಿದರು. ಶ್ವಾನ ಸೌಮ್ಯಾ ಸಾಧನೆ ಬಗ್ಗೆ ಅಧಿಕಾರಿಗಳು ಕೊಂಡಾಡಿದರು. ನಿಧನ ಹೊಂದಿದ ಶ್ವಾನ ಸೌಮ್ಯ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸೇರಿದಂತೆ ಅನೇಕ ಗಣ್ಯರ ಭದ್ರತಾ ಉಸ್ತುವಾರಿ ವಹಿಸಿಕೊಂಡಿತ್ತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!