Download Our App

Follow us

Home » ರಾಜಕೀಯ » ಆರದ ಅಸಮಾಧಾನ, ಡಿಸೆಂಬರ್ 6 ರ ನಂತರ ತೀರ್ಮಾನ / ವಿ ಸೋಮಣ್ಣ

ಆರದ ಅಸಮಾಧಾನ, ಡಿಸೆಂಬರ್ 6 ರ ನಂತರ ತೀರ್ಮಾನ / ವಿ ಸೋಮಣ್ಣ

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಇನ್ನು ನಿಂತಿಲ್ಲ ಅನ್ನೋದಕ್ಕೆ ಇಂದು ಮಾಜಿ ಸಚಿವ ವಿ ಸೋಮನ್ನ ನೀಡಿರುವ ಹೇಳಿಕೆ ಸಾಕ್ಷಿಯಾಗಿದೆ. ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ವಿ ಸೋಮಣ್ಣ, ಅಸಮಾಧಾನ ಹೊರಹಾಕಿದ್ದಾರೆ. ನನ್ನನ್ನು ಪಕ್ಷದಲ್ಲಿ ಎಲ್ಲ ರೀತಿಯಿಂದಲೂ ತುಳಿಯುವ ಹುನ್ನಾರ ನಡೆದಿದ್ದು, ಡಿಸೆಂಬರ್ 6 ರ ಬಳಿಕ ತೀರ್ಮಾನ ಪ್ರಕಟಿಸುವದಾಗಿ ಹೇಳಿದ್ದಾರೆ.

ಬಿಜೆಪಿ ಯಾವದೇ ಕುಟುಂಬದ ಆಸ್ತಿಯಲ್ಲ ಎಂದು ಟೀಕಿಸಿರುವ ವಿ ಸೋಮಣ್ಣ, ರಾಜಕಾರಣ ಯಾವದೇ ಮನೆತನಕ್ಕೆ ಸೀಮಿತವಾಗಬಾರದು, ರಾಜಕಾರಣ ನಾಟಕ ಕಂಪನಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ ವೈ ವಿಜಯೇಂದ್ರರ ಬಗ್ಗೆ ವಿ ಸೋಮಣ್ಣ ಗರಂ ಆಗಿದ್ದಾರೆ. ಇನ್ನೂವರೆಗೆ ನನಗೆ ಯಾರು ಸಹ ಸಂಪರ್ಕ ಮಾಡಿಲ್ಲ ಎಂದಿರುವ ಅವರು, ನಾನು ಸಹ ಯಾರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!