ಕೋಲ್ಕತ್ತಾದ ದಕ್ಷಿಣಕ್ಕೆ 54 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಸುಂದರಬನ್ಸ್ನ ಸಾಗರ್ ದ್ವೀಪದಲ್ಲಿ ಗಾಳಿಯೊಂದಿಗೆ ಮಳೆಯು ಪ್ರಾರಂಭವಾಗಿದೆ. ಈ ಪ್ರದೇಶ, ಉಷ್ಣವಲಯದ ಚಂಡಮಾರುತದಿಂದ ಪ್ರಭಾವಿತವಾಗುವ ಪ್ರಮುಖ ಸ್ಥಳಗಳಲ್ಲಿ ಇದು ಒಂದಾಗಿದೆ
ರೆಮೆಲ್ ಚಂಡಮಾರುತ ನಿನ್ನೇ ರಾತ್ರಿ ಬಂಗಾಳದ ಸಾಗರ್ ದ್ವೀಪ ಮತ್ತು ಬಾಂಗ್ಲಾದೇಶದ ಖೆಪುಪಾರಾ ನಡುವೆ ಭೂಕುಸಿತವನ್ನು ಉಂಟುಮಾಡಿದೆ. ಇದು ಗಂಟೆಗೆ 140 ಕಿಮೀ ವೇಗದಲ್ಲಿ ಬೀಸುವ ಗಾಳಿ ಮತ್ತು ಭಾರೀ ಮಳೆಯೊಂದಿಗೆ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ
ರೆಮೆಲ್ ಚಂಡಮಾರುತದ ಸಂಭವನೀಯ ಪರಿಣಾಮದ ದೃಷ್ಟಿಯಿಂದ ಕೊಲ್ಕತ್ತಾ ವಿಮಾನ ನಿಲ್ದಾಣವು ನಿನ್ನೆ ರಾತ್ರಿಯಿಂದ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಕೊನೆಯ ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.
ಅಂತಾರಾಷ್ಟ್ರೀಯ ಮತ್ತು ದೇಶೀಯ ವಲಯಗಳಲ್ಲಿ ಒಟ್ಟು 394 ವಿಮಾನಗಳು, ಆಗಮನ ಮತ್ತು ನಿರ್ಗಮನವನ್ನು ತಡೆಹಿಡಿಯಲಾಗಿದೆ.
ಭಾರತೀಯ ರೈಲ್ವೆಯು ಈ ಪ್ರದೇಶದಲ್ಲಿ ಅನೇಕ ರೈಲುಗಳನ್ನು ರದ್ದುಗೊಳಿಸಿದೆ. ಪಶ್ಚಿಮ ಬಂಗಾಳದ ಶಾಲಿಮಾರ ರೇಲ್ವೆ ನಿಲ್ದಾಣದಲ್ಲಿ, ಭಾರಿ ಬಿರುಗಾಳಿ ಮತ್ತು ಹಳಿ ಕುಸಿತದಿಂದ ಅನಾಹುತ ಆಗಬಾರದು ಎಂದು ರೈಲ್ವೇ ಹಳಿಗೆ ದೊಡ್ಡ ಕಬ್ಬಿಣದ ಸರಳು ಕಟ್ಟಲಾಗಿದೆ.
ಇನ್ನು ರಾಜ್ಯದ ಕಲಬುರಗಿ ಗಡಿ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದ್ದು, ಸಿಡಿಲಿಗೆ ಮೂವರು ಬಲಿಯಾದ ಘಟನೆ ನಡೆದಿದೆ.
