Download Our App

Follow us

Home » ಕರ್ನಾಟಕ » ಧಾರವಾಡದಲ್ಲಿ ನಾಳೆ ಹೋಳಿ ಹಬ್ಬ. ದಯವಿಟ್ಟು ಮೂಕ ಪ್ರಾಣಿಗಳ ಮೇಲೆ ಬಣ್ಣ ಎರಚಬೇಡಿ

ಧಾರವಾಡದಲ್ಲಿ ನಾಳೆ ಹೋಳಿ ಹಬ್ಬ. ದಯವಿಟ್ಟು ಮೂಕ ಪ್ರಾಣಿಗಳ ಮೇಲೆ ಬಣ್ಣ ಎರಚಬೇಡಿ

ಸಾಂಸ್ಕೃತಿಕ ನಗರಿ ಧಾರವಾಡ ನಾಳೆ ಹೋಳಿ ಹಬ್ಬಕ್ಕೆ ಸಾಕ್ಷಿಯಾಗಲಿದೆ. 

ಧಾರವಾಡದ ಎಲ್ ಐ ಸಿ ಸರ್ಕಲ್ ಬಳಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳು ಬಣ್ಣದ ಉತ್ಸವ ಆಯೋಜನೆ ಜೊತೆ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಿದ್ದಾರೆ.  

ಧಾರವಾಡದ ಶಿವಾಜಿ ಸರ್ಕಲ್ ನಲ್ಲಿ ಶಾಸಕ ವಿನಯ ಕುಲಕರ್ಣಿ ಬ್ರಿಗೇಡ್ ನಿಂದ ರೇನ್ ಡ್ಯಾನ್ಸ್ ಹಾಗು ಗಡಿಗೆ ಒಡೆಯುವ ಸ್ಪರ್ಧೆ ಆಯೋಜನೆ ಮಾಡಿದ್ದಾರೆ. 

ಅಲ್ಲದೇ ಠಿಕಾರೆ ರಸ್ತೆಯಲ್ಲಿ ರಾಮರಾಜ್ಯ ಸಂಘಟನೆಯವರು ಸಹ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಿದ್ದು, ಧಾರವಾಡ ನಾಳೆ ರಂಗುರಂಗಿನ ಬಣ್ಣದಲ್ಲಿ ಮಿಂದೇಳಲಿದೆ. 

ನಾಳಿನ ಹಬ್ಬಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಮನವಿ ಮಾಡಿದ್ದಾರೆ.

ನಾಳೆ ನಡೆಯುವ ಬಣ್ಣದ ಹಬ್ಬ ಪ್ರೀತಿ ಬೆಸೆಯುವ ಹಬ್ಬವಾಗಲಿ, ಮೂಕ ಪ್ರಾಣಿಗಳ ಮೇಲೆ ಬಣ್ಣ ಎರಚದಂತೆ ಕರ್ನಾಟಕ ಫೈಲ್ಸ್ ಮನವಿ ಮಾಡಿಕೊಳ್ಳುತ್ತದೆ.

ಕುಡಿದು ವಾಹನ ಚಲಾಯಿಸುವದಾಗಲಿ, ಬಣ್ಣದಾಟದಲ್ಲಿ ತೊಡಗುವ ಯುವತಿಯರಿಗೆ ಕಿಚಾಯಿಸುವದಾಗಲಿ ಮಾಡಬೇಡಿ. ಬಣ್ಣದ ಹಬ್ಬ ಬಂಧುತ್ವ ಬೆಸೆಯಲಿ, ಸೌಹಾರ್ದತೆ ಕಾಪಾಡಲಿ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರ ಕ್ಷುಲ್ಲಕ ರಾಜಕೀಯ / ಹಂಪಣ್ಣವರ ಕಿಡಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಕ್ಷೇತ್ರದಿಂದ ಹೊರಗಿದ್ದರು, ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ ಹೇಳಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರ ಅಭಿವೃದ್ಧಿಯತ್ತ

Live Cricket

error: Content is protected !!