77 ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಧಾರವಾಡ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ದೇಶಭಕ್ತಿ ಗೀತೆಯ ಅಲ್ಬಮ್ ರಚಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಸೀಲ್ದಾರ ಆಗಿರುವ ಮಹಾದೇವ ಸನಮುರಿ, ಇ ಎಸ್ ಐ ಆಸ್ಪತ್ರೆ ವೈದ್ಯ ಡಾ. ಜಗದೀಶ ಗೋಲಬಾವಿ, ಧಾರವಾಡದ ಡಯಟ್ ನಲ್ಲಿ ಶಿಕ್ಷಕರಾಗಿರುವ ಶಂಕರ ಸೋಮರೆಡ್ಡಿ, ಖಾಸಗಿ ಸಂಸ್ಥೆಯ ನರೇಂದ್ರ ಗೋಲಭಾವಿ, ಹುಬ್ಬಳ್ಳಿ ಸ್ಕ್ಯಾನ್ ಸೆಂಟರನ ಡಾ. ವಿಷ್ಣು ಅವರು ಅದ್ಭುತವಾದ ಗೀತೆ ರಚನೆ ಮಾಡಿದ್ದಾರೆ. ಇದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಸೈನಿಕರಿಗೆ ಈ ಗೀತೆಯನ್ನು ಸಮರ್ಪಿಸಿರುವ ಈ ತಂಡದ ಹಾಡನ್ನು ಯೂಟ್ಯೂಬ್ ನಲ್ಲಿ Dr. DBeats ನಲ್ಲಿ ನೋಡಬಹುದಾಗಿದೆ. ರಜೆಯ ದಿನದಲ್ಲಿ ದಾಂಡೇಲಿ ಹಾಗೂ ಮುಂಡಗೋಡಕ್ಕೆ ಹೋಗಿ ಚಿತ್ರ ಸೆರೆ ಹಿಡಿದಿದ್ದಾರೆ.