Download Our App

Follow us

Home » ರಾಜಕೀಯ » ಬಾಳೆ ಎಲೆ ಹಾಕೋ ಟೈಮಿಗೆ ಶೆಟ್ಟರ್ ಬರ್ತಾರೆ: ಆರ್ ಅಶೋಕ್

ಬಾಳೆ ಎಲೆ ಹಾಕೋ ಟೈಮಿಗೆ ಶೆಟ್ಟರ್ ಬರ್ತಾರೆ: ಆರ್ ಅಶೋಕ್

ಬೆಂಗಳೂರು : ಜಗದೀಶ್ ಶೆಟ್ಟರ್ ವಿರುದ್ಧ ಮಾಜಿ ಸಚಿವ ಆರ್ ಅಶೋಕ್ ಬೆಂಗಳೂರಲ್ಲಿ ತೀವ್ರ ವ್ಯಂಗ್ಯಭರಿತ ವಾಗ್ದಾಳಿ ನಡೆಸಿದ್ದಾರೆ.

 

ಬಾಳೆ ಎಲೆ ಹಾಕೋ ಟೈಮಿಗೆ ಹಾಜರಾಗೋದು ಶೆಟ್ಟರ್ ಶೈಲಿ. ನಮ್ಮಲ್ಲೀಗ ಬಾಳೆ ಎಲೆ ರೆಡಿ ಇಲ್ಲ. ಕಾಂಗ್ರೆಸ್ಸಲ್ಲೀಗ ಬಾಳೆ ಎಲೆ ಹಾಕಿರೋದ್ರಿಂದ ಅಲ್ಲಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡುತ್ತಾ ಈದ್ಗಾ‌ ಮೈದಾನ ಹೋರಾಟದ ದಿನಗಳನ್ನು ಆರ್. ಅಶೋಕ್ ಮೆಲಕು ಹಾಕಿದರು.

 

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಹೋರಾಟದ ವೇಳೆ ನಾನು ಯಡಿಯೂರಪ್ಪ, ನನ್ನ ಸಹೋದರ ರವಿ ಹೋಗಿದ್ವಿ‌. ರಾತ್ರಿ ಯಾವುದೊ ತೋಟದಲ್ಲಿ ಮಲಗಿದ್ವಿ‌. ಆಗ ಆ ಹೋರಾಟದಲ್ಲಿ ಜಗದೀಶ್ ಶೆಟ್ಟರ್ ಎಲ್ಲೂ ಕಾಣಿಸಲಿಲ್ಲ. ಬಿ.ಬಿ ಶಿವಪ್ಪ ವಿಪಕ್ಷ ನಾಯಕ ಆಗುವ ಕಾಲಕ್ಕೆ ಸರಿಯಾಗಿ ಶೆಟ್ಟರ್ ಬಂದರು. ಅವರ ಹೆಸರೇ ಇರಲಿಲ್ಲ.

 

ಜಗದೀಶ್ ಶೆಟ್ಟರ್ ಅವರು ಎಲ್ಲಾ ಸಿದ್ಧವಾದ ಮೇಲೆ ಊಟದ ಸಮಯಕ್ಕೆ ಬರುತ್ತಾರೆ. ಅಲ್ಲಿ ಯಾರ ಎಲೆ ಇವರ ಪಾಲಾಗುತ್ತೋ‌ ಎಂದು ಕುಹಕವಾಡಿದರು ಆರ್. ಅಶೋಕ್.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!