ರಾಜ್ಯದಲ್ಲಿರುವ 1.28 ಕೋಟಿ ರೇಷನ ಕಾರ್ಡಧಾರರ ಮೇಲಕ್ಕೆ ಒಂದು ಕೋಟಿ ರೇಷನ ಕಾರ್ಡಧಾರಿಗಳಿಗೆ ಉಚಿತ ಅಕ್ಕಿ ಬದಲಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅವರು ಪ್ರಕಟಿಸಿದರು. ವಿಧಾನಸೌಧದಲ್ಲಿ ಇಂದು ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಗುಣಮಟ್ಟದ ಪಡಿತರ ಪೂರೈಕೆಯತ್ತ ಗಮನ ಹರಿಸಲು ಸೂಚಿಸಿದರು. 28 ಲಕ್ಷ ಪಡಿತರ ಕಾರ್ಡಗಳು ಅನರ್ಹಗೊಂಡವು ಮತ್ತು ಕೆಲವು ಜನರಿಗೆ ತಾಂತ್ರಿಕ ದೋಷ ಇರೋ ಕಾರಣಕ್ಕೆ ಹಣ ವರ್ಗಾವಣೆ ಮಾಡಿಲ್ಲ ಎಂದು ಮುನಿಯಪ್ಪ ಪ್ರಕಟಿಸಿದ್ದಾರೆ. ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ಜಾರಿಗೆ ತರಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಪಡಿತರವನ್ನು ಕಳ್ಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗುಳುವಂತೆ ಅಧಿಕಾರಿಗಳು ನಿರ್ದೆಶಿಸಿದರು.
