Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಜಗದೀಶ ಶೆಟ್ಟರ ಕುಟುಂಬದ ಆಸ್ತಿಯ ಹುಡುಕಾಟ ಶುರು ಆಯ್ತು ನೋಡ್ರಿ.. ಪ್ರಾಪರ್ಟಿ ಲಿಸ್ಟ್ ಇನ್ನು ಬೇಕಾ, ಸಾಕಾ !

ರಾಜ್ಯ ರಾಜಕಾರಣದ ಗಮನವನ್ನು ತಮ್ಮತ್ತ ಸೆಳೆದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಈಗ ಕಾಂಗ್ರೇಸ್ಸಿಗೆ ಬೇಡಿಕೆಯ ರಾಜಕಾರಣಿ. ಪಾಲಿಕೆಯಿಂದ ರಾಜಕಾರಣ ಆರಂಭಿಸಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ರಾಜ್ಯಭಾರ ಮಾಡಿದ ಜಗದೀಶ ಶೆಟ್ಟರ, ತಮ್ಮದೆ ಆದ ಸಾಮ್ರಾಜ್ಯವನ್ನು ವಿಸ್ತರಿಸಿದವರು.

ಬಿಜೆಪಿ ಬಿಟ್ಟು ಕಾಂಗ್ರೇಸ್ ಸೇರಿರುವ ಜಗದೀಶ್ ಶೆಟ್ಟರ ಮೇಲೆ ಸಹಜವಾಗಿ ಬಿಜೆಪಿಯ ಕೆಲ ನಾಯಕರ ಕಣ್ಣು ಬಿದ್ದಿದೆ. ಜಗದೀಶ ಶೆಟ್ಟರ ಮತ್ತವರ ಕುಟುಂಬ ಸಂಪಾದನೆ ಮಾಡಿರುವ, ಅವರ ಹೆಸರಲ್ಲಿ ಇರುವ ಆಸ್ತಿ ವಿವರ ಇಲ್ಲಿದೆ ನೋಡಿ. 

ಜಗದೀಶ ಶೆಟ್ಟರ ಅವರ ಕುಟುಂಬದ ಆಸ್ತಿ ವಿವರ ಇಲ್ಲಿದೆ ನೋಡಿ

1- ಕುಸುಗಲ್ ಗ್ರಾಮದ ಸರ್ವೆ ನಂಬರ್ 77 ಹಿಸ್ಸಾ ನಂ 1 ರಲ್ಲಿ 5 ಜಮೀನು ಜಮೀನು ಪ್ರಶಾಂತ ಶೆಟ್ಟರ ಹೆಸರಿಲ್ಲ.

2 – ಕುಸುಗಲ್ ಗ್ರಾಮದ ಸರ್ವೆ ನಂಬರ್ 1073 ಹಿಸ್ಸಾ ನಂಬರ 1 ರಲ್ಲಿ ಇರುವ 5 ಗುಂಟೆ ಜಮೀನು ಹಿಂದೂಸ್ಥಾನದ ಹೆಸರು, ಸಂಕಲ್ಪ ಶೆಟ್ಟರ ಮತ್ತು ಶೃದ್ದಾ ಶೆಟ್ಟರ ಇದರಲ್ಲಿ ಪಾಲುದಾರರಾಗಿದ್ದಾರೆ.

3 – ಕುಸುಗಲ್ ಗ್ರಾಮದ ಸರ್ವೆ ನಂಬರ್ – 779 ಹಿಸ್ಸಾ ನಂಬರ 7 ರಲ್ಲಿ ಇರುವ 1 ಕೇಂದ್ರ ಜಮೀನು ಹಿಂದೂಸ್ಥಾನ ಪ್ರಾಪರ್ಟಿಸ್ ಹೆಸರಲ್ಲಿದ್ದು, ಸಂಕಲ್ಪ ಶೆಟ್ಟರ ಮತ್ತು ಶೃದ್ದಾ ಶೆಟ್ಟರ ಇದರಲ್ಲಿ ಪಾಲುದಾರರಾಗಿದ್ದಾರೆ.

4 – ಕುಸುಗಲ್ ಗ್ರಾಮದ ಸರ್ವೆ ನಂಬರ್ – 779 ಹಿಸ್ಸಾ ನಂಬರ್ 6 ರಲ್ಲಿ ಇರುವ 1 ಭೂಮಿ ಭೂಮಿ ಪ್ರಶಾಂತ ಶೆಟ್ಟರ ಅವರ ತರ್ಫಿ ಮೊಕ್ತಿಯಾದ ಪ್ರಭು ತಂದೆ ಬಸಪ್ಪ ಲಕ್ಕುಂಡಿ ಹೆಸರಲ್ಲಿದೆ.

5 – ಕುಸುಗಲ್ ಗ್ರಾಮದ ಸರ್ವೆ ನಂಬರ್ – 779 ಹಿಸ್ಸಾ ನಂಬರ್ 5 ರಲ್ಲಿ ಇರುವ 3 ಭೂಮಿ ಭೂಮಿ ಪ್ರಶಾಂತ ಶೆಟ್ಟರ ಅವರ ತರ್ಫಿ ಮೊಕ್ತಿಯಾದ ಪ್ರಭು ತಂದೆ ಬಸಪ್ಪ ಲಕ್ಕುಂಡಿ ಹೆಸರಲ್ಲಿದೆ.

6 – ಕುಸುಗಲ್ ಗ್ರಾಮದ ಸರ್ವೆ ನಂಬರ್ – 779 ಹಿಸ್ಸಾ ನಂಬರ್ 7 ರಲ್ಲಿರುವ ಒಂದು ಜಮೀನು ಹಿಂದೂಸ್ಥಾನ ಪ್ರಾಪರ್ಟಿಸ್ ಹೆಸರಲ್ಲಿದ್ದು, ಸಂಕಲ್ಪ ಶೆಟ್ಟರ ಮತ್ತು ಶೃದ್ದಾ ಶೆಟ್ಟರ ಇದರಲ್ಲಿ ಭಾಗಿಯಾಗಿದ್ದಾರೆ.

7 – ಬಿಡನಾಳ ಗ್ರಾಮದ ಸರ್ವೆ ನಂಬರ 31 ಹಿಸ್ಸಾ ನಂಬರ್ 1 ರಲ್ಲಿ 2 ಜಮೀನು ಜಮೀನು ಪ್ರಶಾಂತ ಶೆಟ್ಟರ ಹೆಸರಿಲ್ಲ

8 – ಬಿಡನಾಳ ಗ್ರಾಮದ ಸರ್ವೆ ನಂಬರ 31 ಹಿಸ್ಸಾ ನಂಬರ್ 4 ರಲ್ಲಿ 5 ರಹಸ್ಯ 22 ಗುಂಟೆ ಜಮೀನು ಪ್ರಶಾಂತ ಶೆಟ್ಟರ ಹೆಸರಿಲ್ಲ.

9 – ಕುಸುಗಲ್ ಗ್ರಾಮದ ಸರ್ವೆ ನಂಬರ್ – 779 ಹಿಸ್ಸಾ ನಂಬರ್ 1 ರಲ್ಲಿರುವ ಒಂದು ಜಮೀನು ಹಿಂದೂಸ್ಥಾನ ಪ್ರಾಪರ್ಟಿಸ್ ಹೆಸರಲ್ಲಿದ್ದು, ಸಂಕಲ್ಪ ಶೆಟ್ಟರ ಮತ್ತು ಶೃದ್ದಾ ಶೆಟ್ಟರ ಇದರ ಒಟ್ಟು ಮೊತ್ತ ಮೊಕ್ತಿಯಾದರು.

10 – ಕುಸುಗಲ್ ಗ್ರಾಮದ ಸರ್ವೆ ನಂಬರ್ – 779 ಹಿಸ್ಸಾ ನಂಬರ್ 3 ರಲ್ಲಿರುವ ಎರಡು ಅಂಗಡಿ ಜಮೀನು ಹಿಂದೂಸ್ಥಾನ ಪ್ರಾಪರ್ಟಿಸ್ ಹೆಸರಲ್ಲಿದ್ದು, ಸಂಕಲ್ಪ ಶೆಟ್ಟರ ಮತ್ತು ಶೃದ್ದಾ ಶೆಟ್ಟರ ಇದರ ಒಟ್ಟು ಮೊಕ್ತಿಯಾದರು.

ಜಗದೀಶ ಶೆಟ್ಟರ ಅವರು ಇಲ್ಲಿಯವರೆಗೆ ಸಂಪಾದಿಸಿರುವ ಆಸ್ತಿಯ ಕುರಿತು ಭಾರತೀಯ ಜನತಾ ಪಕ್ಷದ  ಕಾರ್ಯಕರ್ತ  ಹರೀಶ್ ಶಿವಮಠ ಎಂಬುವವರು ನಾಗೇಶ್ ಕಲಬುರ್ಗಿಯವರ    ಫೇಸ್ ಬುಕ್  ವಾಲ್ ನಲ್ಲಿ ಕಮೆಂಟ್ ಮಾಡಿದ್ದಾರೆ.   ಮತ್ತಷ್ಟು ಧಾಖಲೆ ಇವೆ. ಇಷ್ಟು ಸಾಕಾ, ಇನ್ನು ಬೇಕಾ ಎಂದು ನಾಗೇಶ್ ಕಲಬುರ್ಗಿಯವರಿಗೆ ಪ್ರಶ್ನಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!