ಹಿಂದೊಮ್ಮೆ ಉಡುಪಿಯಲ್ಲಿ ನಡೆದ ಹಿಜಾಬ್ ವಿವಾದದಲ್ಲಿ ಹೆಸರು ಮಾಡಿದ್ದ ಚೈತ್ರಾ ಕುಂದಾಪುರ, ಪೊಲೀಸ್ ವಾಹನದಲ್ಲಿ ತೆರಳುವಾಗ ಅದೇ ಹಿಜಾಬ್ ಧರಿಸಿದ್ದಾಳೆ ಎಂದು ಟ್ರೋಲಿಗರು ಚೈತ್ರಾ ಕಾಲ್ ಎಳೆದಿದ್ದಾರೆ. ಈಕೆಯನ್ನು ಯಾರು ನಂಬಬೇಡಿ, ಈಕೆಯ ಮಾತನ್ನು ಕೇಳಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ಧರ್ಮದ ಹೆಸರಲ್ಲಿ ದುಡ್ಡು ಮಾಡೋದು ಸಹ ಭಯೋತ್ಪಾದನೆ ಎಂದು ಹೇಳಿದ್ದಾರೆ.
ಬಿಜೆಪಿ ಟಿಕೇಟ್ ಕೊಡಿಸುವದಾಗಿ ಹೇಳಿ ಕೋಟ್ಯಾಂತರ ಹಣ ಪಡೆದು ಮೋಸ ಮಾಡಿರುವ ಆರೋಪದ ಮೇಲೆ ಚೈತ್ರಾ ಕುಂದಾಪುರ ಈಗ ಜೈಲುಪಾಲಾಗಿದ್ದಾಳೆ.